ಐದು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ರವಿ ಸುಬ್ರಹ್ಮಣ್ಯ

Public TV
1 Min Read
ambulance

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ ರವರ ಮಾರ್ಗದರ್ಶನದಲ್ಲಿ, ನಿತ್ಯ ನಿರಂತರ ಸೇವಾ ಟ್ರಸ್ಟ್ (ರಿ) ವತಿಯಿಂದ ಕೊರೊನ ಸೇವೆಗಳಿಗಾಗಿ ಉಚಿತ 5 ಅಂಬುಲೆನ್ಸ್ ಗಳ ಸೇವೆಗೆ ಇಂದು ಶ್ರೀನಗರ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.

ambulance 2

ನಂತರ ಈ ಕುರಿತು ಮಾತನಾಡಿದ ರವಿ ಸುಬ್ರಹ್ಮಣ್ಯ, ನಿತ್ಯ ನಿರಂತರ ಸೇವಾ ಟ್ರಸ್ಟ್ ಬಸವನಗುಡಿ ಇದರ ಆಶ್ರಯದಲ್ಲಿ ನಾಗರಿಕರ ಅನುಕೂಲಕ್ಕಾಗಿ ಉಚಿತ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತಿದ್ದು, ಕೋವಿಡ್ -19 ನಿರ್ವಹಣೆಗೆ ಇದರಿಂದ ಅನುಕೂಲವಾಗಲಿದೆ ಎಂದು ಅಭಿಪ್ರಯಾಪಟ್ಟರು.

4dcad3ba 563c 4abf 905f 0b7e998d4775

ಈ ಸಂದರ್ಭದಲ್ಲಿ ನಿತ್ಯ ನಿರಂತರ ಸೇವಾ ಟ್ರಸ್ಟ್ ನ ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಸವನಗುಡಿ ವಿಧಾನಸಭಾ ಕ್ಷೇತ್ರದ ನಾಗರಿಕರು ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ಉಚಿತ ಆಂಬ್ಯುಲೆನ್ಸ್ ಸೇವೆ ಪಡೆಯಬಹುದು ಎಂದು ತಿಳಿಸಿದ್ದಾರೆ. ರಾಜ್ ಗುರು-97428 58998, ಕಿಶನ್-98440 78232

Share This Article
Leave a Comment

Leave a Reply

Your email address will not be published. Required fields are marked *