ಐಎಎಸ್ ಕನಸು ಕಾಣುತ್ತಿರುವ ಬಡ ಅಭ್ಯರ್ಥಿಗಳಿಗೆ ಯಾದಗಿರಿ ಡಿಸಿ ಪಾಠ

Public TV
1 Min Read
ygr ragapriya

– ನಾನೂ ಬಡ ಕುಟುಂಬದಿಂದ ಹೆಣ್ಣುಮಗಳು
– ಸಾಧಿಸುವ ಛಲವಿದ್ದರೆ, ಬಡತನ ಮೆಟ್ಟಿ ಸಾಧಿಸಬಹುದು

ಯಾದಗಿರಿ: ಐಎಎಸ್, ಐಪಿಎಸ್ ಕನಸು ಹೊತ್ತಿರುವ ಬಡ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಅವರು ಸ್ಫೂರ್ತಿ ತುಂಬಿದ್ದು, ಒಂದು ದಿನದ ವಿಶೇಷ ಉಪನ್ಯಾಸ ನೀಡಿದ್ದಾರೆ.

ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ಯುವಕರಿಗಾಗಿ ಎ1 ಆಫಿಸರ್ಸ್ ಅಕಾಡೆಮಿ ಏರ್ಪಡಿಸಿದ್ದ ಒಂದು ತಿಂಗಳ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಅವರು ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ. ಐಎಎಸ್ ಕನಸು ಕಾಣುತ್ತಿರುವ ಯಾವುದೇ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ನಾನು ಸದಾ ಸಿದ್ಧ. ಸಮಯ ಸಿಕ್ಕಾಗ ನಿಮ್ಮ ಜೊತೆಗೆ ಕಳೆಯುತ್ತೇನೆ ಎಂದು ಭರವಸೆ ನೀಡಿದ್ದಾರೆ.

WhatsApp Image 2020 12 10 at 6.10.05 PM

ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ವಿದ್ಯಾರ್ಥಿಗಳಿಗೆ ಐಎಎಸ್ ಪಾಸ್ ಮಾಡುವ ತಂತ್ರಗಾರಿಕೆ ಕುರಿತು ಬೋಧಿಸಿದರು. ತಮ್ಮ ಅಭ್ಯಾಸ ದಿನಗಳನ್ನು ಮೆಲುಕು ಹಾಕಿದ ಅವರು, ನಾನು ಕೂಡ ಬಡತನದ ಮನೆಯಿಂದ ಬಂದ ಹೆಣ್ಣುಮಗಳು, ಸಾಧಿಸುವ ಛಲವಿದ್ದರೆ ಬಡತನವನ್ನು ಸುಲಭವಾಗಿ ಮೆಟ್ಟಿ ನಿಲ್ಲಬಹುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *