ಎಸ್‌ಐಟಿ ವಿಚಾರಣೆಗೆ ಗೈರು – ಸಿಡಿ ಲೇಡಿ ಮುಂದಿದೆ ಮೂರು ಆಯ್ಕೆ

Public TV
2 Min Read
cd lady

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅತ್ಯಾಚಾರ ಪ್ರಕರಣ ದಾಖಲಾದರೂ ಇತ್ತ ವಿಶೇಷ ತನಿಖಾ ತಂಡ(ಎಸ್‌ಐಟಿ) ಯುವತಿಗೆ ನೋಟಿಸ್‌ ಮೇಲೆ ನೋಟಿಸ್‌ ಜಾರಿ ಮಾಡುತ್ತಿದ್ದು ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿಲ್ಲ.

ಹೌದು. ಆರಂಭದಲ್ಲಿ ದಿನೇಶ್‌ ಕಲ್ಲಹಳ್ಳಿ ನೀಡಿದ ದೂರಿನ ಆಧಾರದಲ್ಲಿ ಯುವತಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆಕೆಯ ಮನೆಯ ಬಾಗಿಲಿಗೆ ಅಂಟಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೇ ದಿನೇಶ್‌ ಕಲ್ಲಹಳ್ಳಿ ಮೂಲಕವೂ ನೋಟಿಸ್‌ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ.

CD LADY PARENTS 4

ಇದಾದ ಬಳಿಕ ಆಕೆಯ ವಾಟ್ಸಪ್‌ ನಂಬರ್‌, ಇಮೇಲ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ಪ್ರಕ್ರಿಯೆ ನಡುವೆ ಯುವತಿ ವಿಡಿಯೋ ರಿಲೀಸ್‌ ಮಾಡಿ ನಾನು ಎಸ್‌ಐಟಿ ಮುಂದೆ ಕೆಲ ದಿನದ ಒಳಗಡೆ ಹಾಜರಾಗುತ್ತೇನೆ. ನನಗೆ ರಕ್ಷಣೆ ನೀಡಬೇಕು ಎಂದು ಕೇಳಿ ಮನವಿ ಮಾಡಿದ್ದಳು. ಈ ವಿಡಿಯೋದ ಬಳಿಕ ಮತ್ತೊಂದು ವಿಡಿಯೋ ಮಾಡಿ ನಾನು ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ನಾನು ಹೇಳಿಕೆ ನೀಡುವ ಸಂದರ್ಭದಲ್ಲಿ ನನ್ನ ತಂದೆ, ತಾಯಿ ಇರಬೇಕು. ಅನ್ಯಾಯ ಆಗಿರುವುದು ನನಗೆ. ಆದರೆ ಎಸ್‌ಐಟಿ ರಮೇಶ್‌ ಜಾರಕಿಹೊಳಿ ಪರವಾಗಿ ಕೆಲಸ ಮಾಡುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಳು.

ಶುಕ್ರವಾರ ಸಿಡಿ ಲೇಡಿ ಮತ್ತು ಕುಟುಂಬಸ್ಥರ ಜೊತೆಗಿನ ಆಡಿಯೋ ಲೀಕ್‌ ಆಗಿತ್ತು. ಶನಿವಾರ ಸಿಡಿ ಯುವತಿಯ ಪೋಷಕರು ಸುದ್ದಿಗೋಷ್ಠಿ ನಡೆಸಿ, ನಮ್ಮ ಮಗಳನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್‌ ಹೊಲಸು ರಾಜಕಾರಣ ಮಾಡುತ್ತಿದ್ದಾರೆ. ಮಗಳೇ ಎಲ್ಲಿದ್ದರೂ ಬಾ ಎಂದು ಮನವಿ ಮಾಡಿಕೊಂಡಿದ್ದರು.

cd lady parents sit ramesh jarkiholi dk shivakumar

ಪೋಷಕರು ಮಾಧ್ಯಮಗಳ ಜೊತೆ ಹೇಳಿಕೆ ನೀಡಿದ ಬೆನ್ನಲ್ಲೇ ಸಿಡಿ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, ಪೋಷಕರ ಮೇಲೆ ಬಲವಂತವಾಗಿ ಒತ್ತಡ ಹಾಕಿ ಹೇಳಿಕೆಗಳನ್ನು ನೀಡಿಸಲಾಗುತ್ತಿದೆ. ಎಸ್‌ಐಟಿ ಪೊಲೀಸರ ತನಿಖೆಯ ಬಗ್ಗೆ ನನಗೆ ಅನುಮಾನವಿದೆ.ಹೀಗಾಗಿ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುತ್ತೇನೆ ಎಂದು ಹೇಳಿ ವಿಡಿಯೋ ರಿಲೀಸ್‌ ಮಾಡಿದ್ದಳು.

ದೂರು ದಾಖಲಾದ ಬಳಿಕ ಯುವತಿ ವಿಚಾರಣೆಗೆ ಹಾಜರಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯುವತಿ ವಿಡಿಯೋ ಮಾಡಿ ಹೇಳಿಕೆಗಳನ್ನು ನೀಡುತ್ತಿದ್ದಾಳೆ ವಿನಾ: ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಯುವತಿಯ ಮುಂದಿನ ನಡೆ ಏನು ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಯುವತಿಯ ಮುಂದಿದೆ 3 ಆಯ್ಕೆಗಳಿವೆ:
1. ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಬಹುದು
2. ತಮ್ಮ ಪರ ವಕೀಲರ ಜೊತೆಗೆ ನ್ಯಾಯಾಧೀಶರ ಮುಂದೆ ಹಾಜರಾಗಬಹುದು.
3. ಎಸ್ ಐಟಿ ಪೊಲೀಸರ ಮುಂದೆ ಹಾಜರಾಗಿ, ನಿಮಗೆ ಹೇಳಿಕೆ ನೀಡಲ್ಲ ನ್ಯಾಯಾಧೀಶರ ಬಳಿ ಕರೆದುಕೊಂಡು ಹೋಗಿ ಎಂದು ಮನವಿ ಮಾಡಬಹುದು.

ಈಗ ಕೊನೆಯದಾಗಿ ವಕೀಲ ಜಗದೀಶ್‌ ಮೂಲಕ ಯುವತಿಗೆ ನೋಟಿಸ್‌ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವತಿ ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗುವುದು ಅನುಮಾನ. ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಆದೇಶ ನೋಡಿಕೊಂಡು ಎಸ್‌ಐಟಿ ಪೊಲೀಸರ ಮುಂದೆ ಹಾಜರಾಗಬೇಕೋ? ಬೇಡವೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *