– ನಗರ ಪ್ರದೇಶಗಳಿಗೇ ತೆರಳಲ್ಲಿ ಇಲ್ಲಿನ ಗ್ರಾಮಸ್ಥರು
ಧಾರವಾಡ: ಕೊರೊನಾ ಮೊದಲನೇ ಅಲೆ ಮಾತ್ರವಲ್ಲ ಇಷ್ಟೆಲ್ಲ ಪ್ರಕರಣಗಳು ವರದಿಯಾಗಿ ಪರಿಸ್ಥಿತಿ ಗಂಭಿರವಾದರೂ ಜಿಲ್ಲೆಯ ಈ ಗ್ರಾಮಗಳಿಗೆ ಮಾತ್ರ ಕೊರೊನಾ ಎಂಟ್ರಿ ಕೊಟ್ಟಿಲ್ಲ.
ನಗರದಿಂದ 30 ಕಿ.ಮೀ. ದೂರಲ್ಲಿರುವ ಹುಣಶಿಕುಮರಿ ಹಾಗೂ ಶಿವನಗರ ಗ್ರಾಮಗಳಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಕೇಸ್ ಬಂದಿಲ್ಲ. ಈ ಗ್ರಾಮಗಳಲ್ಲಿ 100 ರಿಂದ 150 ಮನೆಗಳಿದ್ದು, 800 ರಿಂದ 1000 ಜನಸಂಖ್ಯೆ ಇದೆ. ಈ ಗ್ರಾಮದ ಜನ ಎರಡಲೇ ಅಲೆ ಆರಂಭವಾದಾಗಿನಿಂದ ನಗರಕ್ಕೆನೇ ಬಂದಿಲ್ಲ. ಏನಾದರೂ ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ತರಕಾರಿ ತರುತಿದ್ದಾರೆ.
ನಗರಗಳ ಕಡೆ ಯಾರೂ ಹೋಗದಂತೆ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ನಗರದಿಂದ ಗ್ರಾಮಕ್ಕೆ ಬಂದವರಿಗೆ ಪ್ರವೇಶ ನೀಡುತ್ತಿಲ್ಲ. ಜಾನುವಾರು ಸಾಕಿ ಜೀವನ ನಡೆಸುವ ಇವರು, ಸದ್ಯ ಹೊಲ ಗದ್ದೆ ಕೆಲಸವನ್ನ ಮಾಡುತ್ತಲೇ ಜೀವನ ನಡೆಸುತಿದ್ದಾರೆ. ಇನ್ನು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ಮಾಡದಂತೆ ಎಚ್ಚರಿಕೆ ನೀಡಿರುವ ಗ್ರಾಮದ ಹಿರಯರು, ಹೊರ ಗ್ರಾಮಗಳಲ್ಲಿ ಕೂಡಾ ಕಾರ್ಯಕ್ರಮ ಇದ್ದರೆ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಅಲ್ಲದೆ ಹಾಲು ಹಾಕಲು ಬೇರೆ ಗ್ರಾಮಕ್ಕೆ ತೆರಳಲು ಗ್ರಾಮದ ಇಬ್ಬರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಅದೇ ಇಬ್ಬರು ದಿನಸಿ ಕೂಡ ತಂದು ಕೊಡಬೇಕು. ಈ ರೀತಿಯಾಗಿ ನಿಮಯ ಮಾಡಿ ಗ್ರಾಮಕ್ಕೆ ಕೊರೊನಾ ಎಂಟ್ರಿ ಕೊಡದಂತೆ ಎಚ್ಚರಿಕೆ ವಹಿಸಿದ್ದಾರೆ.