ಉಸಿರಾಡಲು ಕಷ್ಟಪಡುತ್ತಿದ್ದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ

Public TV
1 Min Read
KWR FISH

– ಕಾರ್ಮಿಕರ ವಿಕೃತ ಮನಸ್ಸಿಗೆ ಜನರ ಛೀಮಾರಿ

ಕಾರವಾರ: ಪ್ರಾಣ ಉಳಿಸಿಕೊಳ್ಳಲು ಮೀನು ಬಾಯಿ ತೆಗೆದ್ರೆ ಕೆಲ ವಿಕೃತ ಮನಸ್ಸುಗಳು ಬೀಡಿ ಇರಿಸಿ ವಿಕೃತಿ ಮೆರೆದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ವಿಕೃತ ಮನಸ್ಸುಗಳ ವಿರುದ್ಧ ಕಿಡಿಕಾರಿದ್ದಾರೆ.

KWR FISH

ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ಈ ಘಟನೆನಡೆದಿದೆ ಎಂದು ಹೇಳಲಾಗುತ್ತಿದೆ. ಕಾರ್ಮಿಕರು ಹಿಂದಿ ಮಾತನಾಡುವುದನ್ನ ನೀವು ವೀಡಿಯೋದಲ್ಲಿ ಕೇಳಬಹುದಾಗಿದೆ. ಮೀನುಗಾರರು ಬೊಂಡಾಸ ಹೆಸರಿನ ಮೀನು ಹಿಡಿದಿದ್ದಾರೆ. ಮೀನು ತನ್ನ ಜೀವ ಉಳಿಸಿಕೊಳ್ಳುವದಕ್ಕಾಗಿ ಬಾಯಿ ತೆಗೆದು ಉಸಿರಾಡುತ್ತಿತ್ತು. ಇದೇ ವೇಳೆ ಅಲ್ಲಿದ್ದ ಕಾರ್ಮಿಕನೋರ್ವ ಬೀಡಿ ಹಚ್ಚಿ ಮೀನಿನ ಬಾಯಿಗೆ ಇಟ್ಟಿದ್ದಾನೆ. ಈ ಎಲ್ಲ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬೋಟ್ ಕಾರ್ಮಿಕರ ವರ್ತನೆ ಕಂಡ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ಮೀನಿನ ಜೊತೆ ಅಮಾನವೀಯ ವರ್ತನೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *