ಉತ್ತರ ಕನ್ನಡ ಸಾರಿಗೆ ನೌಕರರಿಗೆ ವರ್ಗಾವಣೆ ಶಿಕ್ಷೆ

Public TV
0 Min Read
kwr bustop

– ಕರ್ತವ್ಯಕ್ಕೆ ಹಾಜರಾಗದ್ದಕ್ಕೆ ವರ್ಗಾವಣೆ

ಕಾರವಾರ: ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಇಂತಹ ಸಾರಿಗೆ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಿಂದ 40 ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಆಡಳಿತಾತ್ಮಕ ಕಾರಣ ನೀಡಿ ಇಂದು ವರ್ಗಾವಣೆ ಮಾಡಲಾಗಿದೆ.

KSRTC

ವಾಯುವ್ಯ ಸಾರಿಗೆ ವಿಭಾಗದ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರು ವರ್ಗಾವಣೆ ಆದೇಶ ನೀಡಿದ್ದು, 10 ತಾಂತ್ರಿಕ ಸಿಬ್ಬಂದಿ, 30 ಚಾಲಕ, ನಿರ್ವಾಕರು ಸೇರಿ ಒಟ್ಟು 40 ಸಿಬ್ಬಂದಿಯನ್ನು ವಿವಿಧ ಡಿಫೋದಿಂದ ಬೇರೆ ಡೀಪೋಗಳಿಗೆ ವರ್ಗಾವಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *