Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಡುಪಿ ಸೀರೆಗೆ ಮಾಡರ್ನ್ ಟಚ್- ಮಗ್ಗ ಖರೀದಿಸಿ ಸೀರೆ ನೆಯ್ಗೆ ಕಲಿತ ಎಂಬಿಎ ಪದವೀಧರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಉಡುಪಿ ಸೀರೆಗೆ ಮಾಡರ್ನ್ ಟಚ್- ಮಗ್ಗ ಖರೀದಿಸಿ ಸೀರೆ ನೆಯ್ಗೆ ಕಲಿತ ಎಂಬಿಎ ಪದವೀಧರೆ

Districts

ಉಡುಪಿ ಸೀರೆಗೆ ಮಾಡರ್ನ್ ಟಚ್- ಮಗ್ಗ ಖರೀದಿಸಿ ಸೀರೆ ನೆಯ್ಗೆ ಕಲಿತ ಎಂಬಿಎ ಪದವೀಧರೆ

Public TV
Last updated: September 26, 2020 2:22 pm
Public TV
Share
2 Min Read
UDP 14
SHARE

ಉಡುಪಿ: ಎರಡು ವರ್ಷ ಎಂಬಿಎ ಪದವಿ ಮಾಡಿ ಮುಂಬೈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿ ಉಡುಪಿಗೆ ವಾಪಸ್ಸಾಗಿ ನೆಯ್ಗೆ ಮಾಡಿ ಸೀರೆ ತಯಾರಿಸುತ್ತಿದ್ದಾರೆ. ನಿಮಗೆ ಆಶ್ಚರ್ಯ ಆದರೂ ನಿಜ. ಸ್ವಂತದ್ದೇನಾದರೂ ಸಾಧನೆ ಮಾಡಬೇಕು. ಹುಟ್ಟಿದ ಊರಿಗೇನಾದ್ರು ಕೊಡುಗೆ ಕೊಡಬೇಕೆಂಬ ಹಂಬಲ ಮಹಾಲಸ ಕಿಣಿಯ ಈ ನಿರ್ಧಾರಕ್ಕೆ ಕಾರಣ.

ಬಣ್ಣ ಬಣ್ಣದ ಸೀರೆ, ಎಲ್ಲಾ ವಯಸ್ಸಿನವರನ್ನು ಸೆಳೆಯುವ ವಿನೂತನ ಪ್ಯಾಟರ್ನ್ ಗಳು, ಮಗ್ಗದ್ದಾ ಅಂತ ಮೂಗು ಮುರಿಯುವವರೂ ಇಷ್ಟಪಡುವ ಸೀರೆಗಳು. ಉಡುಪಿಯ ಮಣಿಪಾಲ ಮಹಾಲಸಾ ಕಿಣಿ ಎಂಬಿಎ ಪದವಿ ಮುಗಿಸಿರುವಾಕೆ. ಕಲಿದದ್ದು ಎಂಬಿಎ ಆದರೂ ಸೆಳೆದದ್ದು ಮಗ್ಗದ ಸೀರೆ. ಅದರಲ್ಲೂ ಉಡುಪಿ ಕೈಮಗ್ಗದ ಸೀರೆ.

UDP 1 12

ಎಂಬಿಎ ಪದವಿ ಬಳಿಕ ಉಡುಪಿ ಕೈಮಗ್ಗ ಸೀರೆಯತ್ತ ಆಸಕ್ತಿ ತಳೆದ ಈಕೆ, ಮಗ್ಗ ಖರೀದಿಸಲು ಮನಸ್ಸು ಮಾಡಿದ್ದಾರೆ. ನೇಕಾರ ಸಂಘ, ಮನೆಯಲ್ಲೇ ನೇಯುವ ಕುಟುಂಬಗಳನ್ನು ಸಂಪರ್ಕ ಮಾಡಿ ಮಗ್ಗ ಖರೀದಿ ಮಾಡಿದ್ದಾರೆ. ನಾಲ್ಕೈದು ತಿಂಗಳು ತರಬೇತಿ ಪಡೆದು ಮನೆಯಲ್ಲೇ ನೇಯಲು ಕಲಿತಿದ್ದಾರೆ. ಹಳೆಯ ಮಾದರಿ ಸೀರೆಗಳಿಗೆ ಮಾಡರ್ನ್ ಟಚ್ ಕೊಡುತ್ತಿದ್ದಾರೆ. ಮಗ್ಗದ ಮನೆಗಳಿಗೆ ತೆರಳಿ ಹೊಸ ಹೊಸ ವಿನ್ಯಾಸ ರೂಪಿಸಿ ತಯಾರಾದ ಸೀರೆಯನ್ನು ಆನ್‍ಲೈನ್ ಮೂಲಕ ಮಾರಲು ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ.

ಮಹಾಲಸಾ ಕಿಣಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂಬೈ ಕಂಪನಿಯಲ್ಲಿದ್ದೆ. ಒಂದು ವರ್ಷ ನಮ್ಮ ಹೋಟೆಲ್ ನಲ್ಲಿ ಕೆಲಸ ಕೂಡ ಮಾಡಿದ್ದೆ. ನನ್ನದೇ ಸ್ವಂತ ಏನಾದರು ಮಾಡಬೇಕೆಂದು ಕಾಡುತ್ತಲೇ ಇತ್ತು. ನಮ್ಮ ಊರಿಗೂ ಅದರಿಂದ ಉಪಯೋಗ ಆಗಬೇಕು ಎಂಬ ಹಂಬಲ ಇತ್ತು. ಆನ್ ಲೈನ್ ಮೂಲಕ ಬೇರೆ ಬೇರೆ ರಾಜ್ಯಗಳ ಸೀರೆಗಳನ್ನು ಮಾರಾಟ ಮಾಡುತ್ತೇನೆ. ನನಗೆ ಸ್ಪಲ್ಪ ಲಾಭ ಇದೆ. ಸಾವಿರದಷ್ಟು ಜನ ಉಡುಪಿ ಸೀರೆ ನೇಯುತ್ತಿದ್ದರು. ಆ ಸಂಖ್ಯೆ ನೂರಕ್ಕೆ ಬಂದಿದೆ. ಬೇಡಿಕೆ ಮತ್ತು ವರಮಾನ ಹೆಚ್ಚಾದರೆ ನೇಕಾರರಿಗೆ ಶಕ್ತಿ ಬಂದಂತಾಗುತ್ತದೆ ಎಂದು ಹೇಳಿದರು.

UDP 2 7

ಮಹಾಲಸಾ ಕಿಣಿ ಮಲ್ಸಿ ಹೆಸರಿನ ಸಂಸ್ಥೆ ಮೂಲಕ ಆನ್ ಲೈನ್ ಸೇಲ್ ನಡೆಸುತ್ತಾರೆ. ಕೊರೊನಾ ಸಮಯದಲ್ಲಿ ಪೂರ್ಣವಾಗಿ ಉಡುಪಿ ಕೈಮಗ್ಗ ಸೀರೆಯ ನೆಯ್ಗೆ, ಉಡುಪಿ ಕೈಮಗ್ಗ ಸೀರೆಯ ಕುರಿತು ಜಾಗೃತಿ, ಅಳಿವಿನಂಚಿನಲ್ಲಿರುವ ನೇಕಾರ ಕುಟುಂಬಗಳಿಗೆ ಉತ್ತೇಜನ ಕೊಡುವಲ್ಲಿ ಶ್ರಮಪಟ್ಟಿದ್ದಾರೆ. ಉಡುಪಿ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ, ಕಿನ್ನಿಗೋಳಿ ನೇಕಾರರ ಸಂಘದ ಸದಸ್ಯರ ಬಳಿ ಸೀರೆ ನೆಯ್ಗೆ ಮಾಡಿಸುತ್ತಿದ್ದಾರೆ. ಸೀರೆಯೊಂದಕ್ಕೆ 850 ರಿಂದ 2,000ರೂ. ಮೌಲ್ಯಕ್ಕೆ ಆನ್ ಲೈನ್ ಮೂಲಕ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ. ಆಫೀಸ್, ಕಾಲೇಜುಗಳಲ್ಲಿ ಉಡುಪಿ ಸೀರೆ ಸೇಲ್ ಆಗ್ತಾಯಿದೆ. ನೇಕಾರ ಸಮುದಾಯಕ್ಕೆ ಮಹಾಲಸ ಹೊಸ ಶಕ್ತಿ ತಂದುಕೊಟ್ಟಿದ್ದಾರೆ.

ನೇಕಾರ ಮಹಿಳೆ ಗೀತಾ ಮಾತನಾಡಿ, ಮಹಾಲಸಾ ಆರಂಭದಲ್ಲಿ ನೇಯುವ ಕೆಲಸ ಕಲಿತುಕೊಂಡರು. ಆಮೇಲೆ ಒಂದು ಮಗ್ಗವನ್ನು ಖರೀದಿ ಮಾಡಿದ್ದಾರೆ. ನಾವು ಹಲವಾರು ವರ್ಷ ಒಂದೇ ತರದ ಸೀರೆ ನೇಯುತ್ತಿದ್ದೆವು. ಈಗ ಹೊಸ ಹೊಸ ಡಿಸೈನ್. ಈಗಿನ ಯುವತಿಯರಿಗೆ ಇಷ್ಟವಾಗುವ ಡಿಸೈನ್ ನೇಯಲು ಶುರು ಮಾಡಿದ್ದೇವೆ. ಸಂಪಾದನೆಯೂ ಚೆನ್ನಾಗಿದೆ. ಆದ್ರೆ ಸರಕಾರ ಪ್ರೋತ್ಸಾಹಿಸಬೇಕಿದೆ. ಪೆನ್ಶನ್ ಜಾರಿಯಾಗಬೇಕು. ವಯಸ್ಸಾಯ್ತು ಇನ್ನು ನೆಯ್ಗೆ ಮಾಡಿ ಜೀವನ ಕಳೆಯೋದು ಕಷ್ಟ ಎಂದರು.

UDP 3 3

ಅಸ್ಸಾಂ, ತ್ರಿಪುರ, ಪಂಜಾಬ್- ಮಧ್ಯಪ್ರದೇಶ, ತಮಿಳ್ನಾಡು ರಾಜ್ಯಗಳ ಮಗ್ಗದ ಸೀರೆಗಳನ್ನೂ ಮಹಾಲಸ ತರಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿಯ ವಿನಿಮಯ ಜೊತೆ ಅಲ್ಲಿನ ನೇಕಾರ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಎಂಬಿಎಯಲ್ಲಿ ಕಲಿತ ಮಾರ್ಕೆಟಿಂಗ್ ಥಿಯರಿ ಪ್ರ್ಯಾಕ್ಟಿಕಲ್ ಆಗಿ ಬಳಕೆಯಾಗುತ್ತಿದೆ.

TAGGED:MBAPublic TVSareeudupiಉಡುಪಿಎಂಬಿಎಪದವೀಧರೆಪಬ್ಲಿಕ್ ಟಿವಿಸೀರೆ
Share This Article
Facebook Whatsapp Whatsapp Telegram

Cinema news

Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood
Mahesh Babus AMB Cinemas
ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’
Cinema Latest South cinema Top Stories
Ranveer Singh in Dhurandhar 2
ಜಾಗಿಂಗ್‌ ಮಾಡುತ್ತಾ ‘ಧುರಂಧರ್’‌ ಸಿನಿಮಾ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ
Bollywood Cinema Latest Main Post World
I Want Nayanthara AIADMK MPs Dig At MK Stalins Initiative Sparks Row
ನನಗೆ ನಯನತಾರ ಬೇಕು, ಕನಸು ಈಡೇರಿಸುವಿರಾ – ಎಐಎಡಿಎಂಕೆ ಸಂಸದನ ಪ್ರಶ್ನೆ
Cinema Latest National South cinema Top Stories

You Might Also Like

Oil tanker heading to China makes U turn Russian oil is coming to Mangaluru
Dakshina Kannada

ಚೀನಾಗೆ ತೆರಳುತ್ತಿದ್ದ ಟ್ಯಾಂಕರ್‌ ದಿಢೀರ್‌ ಯೂಟರ್ನ್‌ – ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ

Public TV
By Public TV
5 minutes ago
Raichuru crime 1
Crime

ಪತ್ನಿ ಜೊತೆ ಅನೈತಿಕ ಸಂಬಂಧ – ಕೊಡಲಿಯಿಂದ ಕೊಚ್ಚಿ ಪ್ರಿಯಕರನ ಹತ್ಯೆಗೈದಿದ್ದ ಇಬ್ಬರು ಅರೆಸ್ಟ್

Public TV
By Public TV
23 minutes ago
Ugadi
Latest

ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ?

Public TV
By Public TV
48 minutes ago
Indore Fire Accident
Latest

ಶಾರ್ಟ್ ಸರ್ಕ್ಯೂಟ್‌ನಿಂದ ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಬೆಂಕಿ – 7 ಮಂದಿ ಸಜೀವ ದಹನ

Public TV
By Public TV
1 hour ago
KH Muniyappa 1
Bengaluru City

ಒಂದು ವಾರ ಸಹಕಾರ ಕೊಟ್ಟರೆ ಹೋಟೆಲ್‌ಗಳಿಗೆ ಸಿಲಿಂಡರ್ ಕೊಡ್ತೀವಿ: ಕೆ.ಹೆಚ್. ಮುನಿಯಪ್ಪ

Public TV
By Public TV
2 hours ago
RAMALINGA REDDY
Bengaluru City

ವೈಷ್ಣೋದೇವಿ ಯಾತ್ರೆಗೂ ಸರ್ಕಾರದಿಂದ ಸಹಾಯ ಧನ: ರಾಮಲಿಂಗಾರೆಡ್ಡಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?