ಇಲ್ಲಿದ್ರೆ ಹಿಡಿತಾರೆ, ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು : ಬಿ.ಸಿ. ಪಾಟೀಲ್

Public TV
1 Min Read
BC PATIL 1

ಮೈಸೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗೆ ಸಚಿವ ಬಿ.ಸಿ. ಪಾಟೀಲ್ ಮೌನ ಮುರಿದಿದ್ದಾರೆ. ನಮ್ಮನ್ನು  ಹಿಡಿತಾರೆ ಹೊಡಿತಾರೆ ಅಂತಾ ಮುಂಬೈಗೆ ಹೋಗಿದ್ದೇವು ಎಂದಿದ್ದಾರೆ.

BC PATIL 2

ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕದಲ್ಲಿ ಆಗ ಭಯಾನಕವಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಹೆದರಿಕೆಯಿಂದ ಮುಂಬೈಗೆ ಹೋಗಿದ್ದೇವು ಎಂದು ಉತ್ತರಿಸಿದ್ದಾರೆ. ನಮ್ಮದು ಬಾಂಬೆ ಟೀಂ ಅಂತ ಯಾವುದು ಇರಲಿಲ್ಲ. ಮಾಧ್ಯಮದವರೇ ನಮಗೆ ಬಾಂಬೆ ಟೀಂ ಅಂತ ಹೆಸರು ಕೊಟ್ಟಿದ್ದು. ನಾವು ಬಾಂಬೆಗೆ ಹೋಗುವುದಕ್ಕೆ ಇಲ್ಲಿನ ಭಯಾನಕ ಪರಿಸ್ಥಿತಿ ಕಾರಣವಾಗಿತ್ತು ಎಂದು ಪ್ರತಿಕ್ರಿಯಿಸಿದರು.

BC PATIL 3

ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್‍ ಗೆ ಲಿಫ್ಟ್ ಅಲ್ಲಿ ಹಾಕಿಕೊಂಡು ಹೊಡೆದಿದ್ದರು. ಆ ಮೇಲೆ ಖರ್ಗೆ ಆಫೀಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ದರು. ಇದರಿಂದಾಗಿ ನಮಗೆ ಏನಾಗುತ್ತದೋ ಎಂಬ ಹೆದರಿಕೆಯಿಂದ ನಾವು ಮುಂಬೈಗೆ ಹೋಗಿದ್ದೇವು. ನಾವು ನಮ್ಮ ಸ್ವತಂತ್ರದಲ್ಲಿ ರಾಜೀನಾಮೆ ಕೊಟ್ಟಿರುವುದು. ನಮ್ಮ ಟೀಂ ಅಲ್ಲಿ ಒಡಕು ಏನಿಲ್ಲ ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಾವು ಮುಂಬೈ ಟೀಂ ಅಲ್ಲ ಈಗ ನಾವೆಲ್ಲ ಕರ್ನಾಟಕದಲ್ಲೆ ಇದ್ದೇವೆ. ಮತ್ತೆ ಮುಂಬೈಗೆ ಹೋಗುವಂತ ಪರಿಸ್ಥಿತಿ ಇಲ್ಲ, ಹೋಗಿದ್ದ ನಾವೆಲ್ಲರು ಸ್ನೇಹಿತರು. ಈಗ ಇನ್ನು 104 ಜನ ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ ಈಗ ನಾವೆಲ್ಲ ಒಂದೇ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *