ದಿನಗಳು ಕಳೆಯುತ್ತಿದ್ದಂತೆ ದೊಡ್ಮನೆಯಲ್ಲಿ ಗುಂಪುಗಾರಿಕೆ ಕುರಿತು ಚರ್ಚೆ ಶುರುವಾಗಿದ್ದು, ಇದಕ್ಕೆ ವೈಷ್ಣವಿ ಮನೆಯಲ್ಲಿ ಗುಂಪುಗಾರಿಕೆ ಇಲ್ಲ ಎಂದೇ ಹೇಳಿದ್ದಾರೆ. ಅಷ್ಟಕ್ಕೂ ಯಾವ ಆಧಾರದ ಮೇಲೆ ವೈಷ್ಣವಿ ಹಾಗೆ ಹೇಳಿದ್ರು ಅಂತೀರಾ ಈ ವೀಡಿಯೋ ನೋಡಿ.
ಗುಂಪುಗಾರಿಕೆ ಕುರಿತು ಬಿಗ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಈ ಕುರಿತ ಚರ್ಚೆಗೆ ಪ್ರಶಾಂತ್ ಸಂಬರಗಿ ಅವರು ಆರಂಭ ಹಾಡಿದ್ದು, ಕಿಚನ್ನಲ್ಲಿ ವೈಷ್ಣವಿ, ಅರವಿಂದ್ ಹಾಗೂ ಚಕ್ರವರ್ತಿ ಅವರು ಇರುವಾಗ ಮಾತನಾಡಿದ್ದಾರೆ. ಇದಕ್ಕೆ ವೈಷ್ಣವಿ ತಕ್ಕ ಉತ್ತರವನ್ನೇ ನೀಡಿದ್ದು, ಆ ಮೆಂಟಾಲಿಟಿಯಿಂದ ಹೊರಗೆ ಬನ್ನಿ ಎಂದಿದ್ದಾರೆ.
ಕಿಚನ್ನಲ್ಲಿ ಇರುವಾಗ ಅರವಿಂದ್ ನೆಕ್ಸ್ಟ್ ಫೈಟ್ ನಿಮ್ಮ ಜೊತೆಗೆ ಎಂದು ವೈಷ್ಣವಿಗೆ ಇದಕ್ಕೆ ಉತ್ತರಿಸಿದ ವೈಷ್ಣವಿ ನನ್ನ ಪ್ರಕಾರ ಅದು ಅವರ ಟೈಮ್ ಹಾಗೂ ಎನರ್ಜಿ ವೇಸ್ಟ್ ಎಂದು ಹೇಳಿದ್ದಾರೆ. ಆಗ ಅರವಿಂದ್ ವೈಷ್ಣವಿ ಕಿಚನ್ ರಾಜಕೀಯ ಮಾಡುತ್ತಿದ್ದಾರೆ ಎಂದು ಅರವಿಂದ್ ಹೇಳುತ್ತಾರೆ. ಆಗ ಚಕ್ರವರ್ತಿ ಅವರು ನನ್ನೇ ಚೈಲ್ಡ್ ಅಂತೀರಾ ನೀವು ಎಂದು ಶುರು ಮಾಡುತ್ತಾನೆ ಎಂದು ಪ್ರಶಾಂತ್ ಸಂಬರಗಿ ಇರುವಾಗಲೇ ವೈಷ್ಣವಿಗೆ ಹೇಳುತ್ತಾರೆ.
ಹೀಗೆ ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಪ್ರಶಾಂತ್ ಸಂಬರಗಿ, ಅಧರ್ಮ, ಗುಂಪುಗಾರಿಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ. ಆಗ ವೈಷ್ಣವಿ ನಾನು ಈಗಲೇ ತೋರಿಸುತ್ತೇನೆ ನಿಮಗೆ ಗುಂಪುಗಾರಿಕೆ ಇಲ್ಲ ಅಂತ ಎನ್ನುತ್ತಾರೆ. ಆಗ ಚಕ್ರವರ್ತಿ ಯಾವುದರಲ್ಲಿ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸುತ್ತಾರೆ. ಆಗ ಎಲ್ಲರೂ ಭರ್ಜರಿ ನಗುತ್ತಾರೆ.
ಆಗ ವೈಷ್ಣವಿ ಗುಂಪುಗಾರಿಕೆ ಬಗ್ಗೆ ವಿವರವಾಗಿ ಹೇಳುತ್ತಾ, ಇಬ್ಬರು ಮಾತನಾಡುತ್ತಿದ್ದರೆ ಅದು ಗುಂಪು ಅಲ್ಲ, ಇಬ್ಬರು ಮಾತನಾಡುತ್ತಿದ್ದರೆ ಅವರಲ್ಲಿ ಸಂಬಂಧ ಇದೆ ಅಂತಲ್ಲ. ಮನೆ ಎಲ್ಲ ಬಿಟ್ಟು ಬಂದಿದ್ದೇವೆ, ಒಂದು ಕಂಫರ್ಟ್ ಝೋನ್ ಕಂಡುಕೊಳ್ಳುವುದು ತಪ್ಪಲ್ಲ ಎಂದಿದ್ದಾರೆ.
ಆಗ ಚಕ್ರವರ್ತಿಯವರು ಮಧ್ಯ ಪ್ರವೇಶಿಸಿ ನನಗೆ ಹೇಳೋ ಅದೇನು ಎಂದು ಸಂಬರಗಿಗೆ ಕೇಳುತ್ತಾರೆ, ಆಗ ಹೇಳುತ್ತೇನೆ ಬಾ ವೇದಿಕೆ ಇದಕ್ಕಲ್ಲ. ಅದಕ್ಕೊಂದು ಪ್ರೈವೇಟ್ ವೇದಿಕೆ ಇದೆ ಬಾ ಎಂದು ಕರೆದುಕೊಂಡು ಹೊರಗೆ ಹೋಗುತ್ತಾರೆ.