ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬಗ್ಗೆ ಸತ್ಯಾಂಶ ತಿಳಿಯಲಿದೆ: ನಾರಾಯಣಗೌಡ

Public TV
1 Min Read
klr narayan gowda

ಕೋಲಾರ: ಸಿಡಿಲೇಡಿ ವಿಚಾರಕ್ಕೆ ಸಂಭಂದಿಸಿದಂತೆ ಸತ್ಯಾಂಶ ಇನ್ನೂ ಹೊರಗಡೆ ಬಂದಿಲ್ಲ, ಸತ್ಯಾಂಶ ಹೊರಬಂದರೆ ನನಗಿಂತ ಮೊದಲು ಮಾಧ್ಯಮದವರಿಗೇ ತಿಳಿಯುತ್ತದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.

CD LADY 12121

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿಲೇಡಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೆರಡು ದಿನದಲ್ಲಿ ಸತ್ಯಾಂಶ ತಿಳಿಯುತ್ತದೆ. ಆ ಯುವತಿ ಕಾಲಾವಕಾಶಬೇಕು, ಮೆಡಿಕಲ್ ಟೆಸ್ಟ್ ಅಗಬೇಕು ಎಂದು ಹೇಳುತ್ತಿದ್ದಾಳೆ. ಹೀಗಾಗಿ ಮೆಡಿಕಲ್ ಟೆಸ್ಟ್ ಆದ ನಂತರ ಸಂತ್ಯಾಂಶ ಗೊತ್ತಾಗುತ್ತದೆ. ಈ ವಿಚಾರದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ದೊಡ್ಡವರು ಎನ್ನುವ ಪ್ರಶ್ನೆ ಇಲ್ಲ, ಯಾರೂ ಯಾರಿಗೂ ಹೆದುರುವುದಿಲ್ಲ ಎಂದರು.

ಸಿಡಿಲೇಡಿ ಪ್ರಕರಣದಲ್ಲಿ ಕಾಂಗ್ರೇಸ್ ಮಹಾನಾಯಕನ ಹೆಸರು ಜೊತೆ ಬಿಜೆಪಿ ಯುವನಾಯಕನ ಹೆಸರು ಕೇಳಿ ಬರುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಸುಳ್ಳು ಎಂದರು.

CD LADY

ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಮತ್ತು ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ. ಸಿಡಿ ಕೇಸ್ ಬೆಳಗಾವಿ ಸೇರಿದಂತೆ ಯಾವುದೇ ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *