ಇತಿಹಾಸ ಪ್ರಸಿದ್ಧ ಹಳೇಬೀಡಿನ ಕೆರೆ ಕೋಡಿ ಒಡೆದು ನೀರು ಹೊರಕ್ಕೆ- ರೈತರ ಆಕ್ರೋಶ

Public TV
1 Min Read
hsn lake

– ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು ಕಿಡಿ

ಹಾಸನ: ಇತಿಹಾಸ ಪ್ರಸಿದ್ಧ ಹಳೇಬೀಡಿನ ದ್ವಾರ ಸಮುದ್ರ ಕೆರೆಕೋಡಿಯನ್ನು ಒಡೆದು ನೀರು ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ರೈತರು, ಸಾರ್ವಜನಿಕರು ಆಕ್ರೋಶ ಹೊರಹಾಕಿ, ಪ್ರತಿಭಟನೆ ನಡೆಸಿದ್ದಾರೆ.

vlcsnap 2020 11 01 08h07m38s173

ದ್ವಾರಸಮುದ್ರ ಕೆರೆಯ ಏರಿ ಕುಸಿಯುವ ಭೀತಿ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಕೋಡಿ ಒಡೆದು ನೀರನ್ನು ಹೊರ ಬಿಡುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿರುವ ಸಾರ್ವಜನಿಕರು, ಹದಿಮೂರು ವರ್ಷದ ನಂತರ ದ್ವಾರಸಮುದ್ರ ಕೆರೆ ತುಂಬಿದೆ. ಕೆರೆಯ ಏರಿ ಕುಸಿಯುವ ಬಗ್ಗೆ ಕೆರೆ ಖಾಲಿ ಇದ್ದಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ ಅಧಿಕಾರಿಗಳು ಆಗ ಕೆರೆ ಏರಿ ದುರಸ್ಥಿ ಮಾಡಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

vlcsnap 2020 11 01 08h07m38s173 1

ಈಗ ಕೆರೆ ತುಂಬಿದ ನಂತರ ಕೆರೆ ಏರಿ ಕುಸಿಯುತ್ತೆ ಎಂದು ಕೋಡಿ ಒಡೆದು ನೀರನ್ನು ಹೊರಬಿಡುತ್ತಿದ್ದಾರೆ. ಅಧಿಕಾರಿಗಳ ಬೇಜವಬ್ದಾರಿತನದಿಂದ ಕೆರೆ ತುಂಬಿದ್ದರೂ ರೈತರು ಅದರಿಂದ ಅನುಕೂಲ ಪಡೆಯದಂತೆ ಆಗಿದೆ. ಇನ್ನಾದರೂ ಅಧಿಕಾರಿಗಳು ಕೆರೆಕೋಡಿ ಪೂರ್ತಿ ಒಡೆಯುವ ಆಲೋಚನೆ ಕೈಬಿಟ್ಟು, ಕುಸಿಯುವ ಬೀತಿಯಲ್ಲಿರುವ ಕೆರೆ ಏರಿಯನ್ನು ವೈಜ್ಞಾನಿಕ ವಿಧಾನ ಅನುಸರಿಸಿ ದುರಸ್ಥಿ ಮಾಡಬೇಕಾಗಿದೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *