– ಬೆಂಗಳೂರಿನಲ್ಲಿ 16,662 ಪಾಸಿಟಿವ್, 124 ಬಲಿ
– 2 ಲಕ್ಷ ದಾಟಿದ ಸಕ್ರಿಯ ಪ್ರಕಣಗಳ ಸಂಖ್ಯೆ
– ಸಾವನ್ನಪ್ಪಿದವರ ಸಂಖ್ಯೆ 14 ಸಾವಿರಕ್ಕೆ ಹೆಚ್ಚಳ
ಬೆಂಗಳೂರು: ಕೊರೊನಾ ಆರ್ಭಟ ಮುಂದುವರಿದಿದ್ದು, ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇಂದೂ ಸಹ ದಾಖಲೆಯ 26,962 ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 190 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ. ಇತ್ತ ಉದ್ಯಾನ ನಗರಿ ಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಇಂದು 16,662 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಗರದಲ್ಲಿ ಇಂದು ಬರೋಬ್ಬರಿ 124 ಜನ ಸಾವನ್ನಪ್ಪಿದ್ದಾರೆ. ಸದ್ಯ ರಾಜಧಾನಿಯಲ್ಲಿ 1,49,624 ಸಕ್ರಿಯ ಪ್ರಕರಣಗಳಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆ ಮತ್ತಷ್ಟು ಹೆಚ್ಚಿದೆ.
ರಾಜ್ಯದಲ್ಲಿ 2,14,311 ಸಕ್ರಿಯ ಪ್ರಕರಣಗಳಿದ್ದು, 1,128 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 12,74,959ಕ್ಕೆ ಏರಿಕೆಯಾಗಿದೆ. ಇಂದು 8,697 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.15.19 ಮತ್ತು ಮರಣ ಪ್ರಮಾಣ ಶೇ.0.70ಕ್ಕೆ ಏರಿಕೆಯಾಗಿದೆ. ಈ ವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14,075ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 88, ಬಳ್ಳಾರಿ 695, ಬೆಳಗಾವಿ 220, ಬೆಂಗಳೂರು ಗ್ರಾಮಾಂತರ 588, ಬೆಂಗಳೂರು ನಗರ 16,662, ಬೀದರ್ 416, ಚಾಮರಾಜನಗರ 249, ಚಿಕ್ಕಬಳ್ಳಾಪುರ 471, ಚಿಕ್ಕಮಗಳೂರು 229, ಚಿತ್ರದುರ್ಗ 133, ದಕ್ಷಿಣ ಕನ್ನಡ 485, ದಾವಣಗೆರೆ 200, ಧಾರವಾಡ 472, ಗದಗ 74, ಹಾಸನ 248, ಹಾವೇರಿ 74, ಕಲಬುರಗಿ 742, ಕೊಡಗು 295, ಕೋಲಾರ 504, ಕೊಪ್ಪಳ 84, ಮಂಡ್ಯ 519, ಮೈಸೂರು 645, ರಾಯಚೂರು 428, ರಾಮನಗರ 206, ಶಿವಮೊಗ್ಗ 225, ತುಮಕೂರು 1,004, ಉಡುಪಿ 282, ಉತ್ತರ ಕನ್ನಡ 181, ವಿಜಯಪುರ 429 ಮತ್ತು ಯಾದಗಿರಿಯಲ್ಲಿ 114 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.