ಇಂದು ಸಂಜೆ ಸಿಎಂ ಯಡಿಯೂರಪ್ಪ ಭಾಷಣ

Public TV
0 Min Read
CM BSY

ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ಫೇಸ್‍ಬುಕ್ ಮತ್ತು ಯುಟ್ಯೂಬ್ ಮೂಲಕ ಲೈವ್ ಬರಲಿದ್ದಾರೆ. ಸಿಎಂ ಸುಮಾರು 15 ನಿಮಿಷ ಕಾಲ ಲೈವ್‍ನಲ್ಲಿ ಭಾಷಣ ಮಾಡಲಿದ್ದಾರೆ. ಲೈವ್ ಬರುವ ಮೂಲಕ ರಾಜ್ಯದ ಜನತೆಗೆ ಕೊರೊನಾ ಕುರಿತು ಮಹತ್ತರ ಸಂದೇಶ ನೀಡಲಿದ್ದಾರೆ.

CM MEETING 1

ಲಾಕ್‍ಡೌನ್ ಮುಗಿಯುತ್ತಿದ್ದಂತೆ ಲೈವ್ ಮೂಲಕ ಜನರಿಗೆ ಏನು ಸಂದೇಶ ಕೊಡಬಹುದು ಎಂಬ ಭಾರೀ ಕುತೂಹಲವನ್ನು ಸಿಎಂ ಯಡಿಯೂರಪ್ಪ ಹುಟ್ಟಿಸಿದ್ದಾರೆ. ಬೆಂಗಳೂರು ಅನ್‍ಲಾಕ್ ಬಗ್ಗೆಯೂ ಲೈವ್‍ನಲ್ಲಿ ಮಾತನಾಡುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *