ಬೆಂಗಳೂರು: ನಟಿ ರಾಗಿಣಿ ಮತ್ತು ಸಂಜನಾ ಸಲ್ಲಿಸಿರುವ ಬೇಲ್ ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ ಎನ್ಡಿಪಿಎಸ್ ಕೋರ್ಟ್ನಲ್ಲಿ ನಡೆಯಲಿದೆ.
ಸದ್ಯ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಶನಿವಾರ ವಿಚಾರಣೆ ನಡೆದಾಗ ಸಿಸಿಬಿ ಪರ ವಕೀಲರು ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಸಮಯ ಕೇಳಿದ್ದರು.
ಆಕ್ಷೇಪಣೆ ಪ್ರಮುಖವಾದ ಅಂಶಗಳು ಯಾವುವು..?
ಈಗಾಗಲೇ ಸಾಕ್ಷ್ಯ ನಾಶದ ಆರೋಪ ಇದೆ. ಹೀಗಾಗಿ ಮತ್ತೆ ಸಾಕ್ಷ್ಯ ನಾಶ ಮಾಡ್ತಾರೆ. ಇವರಿಂದ ಮತ್ತಷ್ಟು ಆರೋಪಿಗಳು ಬಚವಾಗೋ ಸಾಧ್ಯತೆ ಇದೆ. ಅಲ್ಲದೆ ಜಾಮೀನು ಸಿಕ್ಕರೆ ಮತ್ತೆ ವಿಚಾರಣೆಗೆ ಸ್ಪಂದಿಸೋದಿಲ್ಲ. ಪ್ರಭಾವಿಗಳ ಸಹಾಯ ಇದೆ. ತನಿಖಾ ಹಾದಿ ತಪ್ಪಲಿದೆ. ಡ್ರಗ್ಸ್ ಪೆಡ್ಲರ್ ಗಳು ಅನ್ನೋದನ್ನ ಆರೋಪಿಗಳು ಈಗಾಗಲೇ ಒಪ್ಪಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ, ಓಆPS ಪ್ರಬಲವಾದ ಪ್ರಕರಣ. ರಾಜ್ಯ ಬಿಟ್ಟು ಹೋಗುವ ಭಯ ಕೂಡ ಇದ್ದು, ಅರ್ಗನೈಸ್ಡ್ ಕ್ರೈಂ ಇದು, ಜಾಮೀನು ಸಿಕ್ಕರೆ ಸಹಾಯ ಆಗಲಿದೆ ಎಂಬುದು ಆಕ್ಷೇಪಣೆಯ ಪ್ರಮುಖ ಅಂಶಗಳಾಗಿವೆ.
ರಾಗಿಣಿಗೆ ಜಾಮೀನು ಸಿಗದೆ ಇರಲು ಕಾರಣಗಳು ಏನು?
ರಾಗಿಣಿ ಬಂಧನ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಗಳು, ಅದರಲ್ಲೂ 21ಛಿ ರಾಗಿಣಿ ಪಾಲಿಗೆ ಬಿಸಿ ತುಪ್ಪ ಆಗಲಿದೆ. ಇಂತಹ ಕೇಸ್ ನಲ್ಲಿ ಸೆಷನ್ಸ್ ಕೊರ್ಟ್ ಬೇಲ್ ನೀಡೋದು ಕಡಿಮೆ. ಸಿಸಿಬಿ ಬಳಿ ಪ್ರಮುಖ ಸಾಕ್ಷಿಗಳು ಇದೆ. ದಾಳಿ ವೇಳೆಯಲ್ಲಿ ರಾಗಿಣಿ ಲಾಕ್ ಮಾಡುವ ಸಾಕ್ಷಿ ಸಿಕ್ಕಿವೆ. ನೊಟೀಸ್ ಗೆ ಉತ್ತರ ನೀಡದೇ ಸಾಕ್ಷಿ ನಾಶ ಪ್ರಯತ್ನ ಆರೋಪ ಮುಖ್ಯವಾಗಲಿದೆ. ಕಷ್ಟಡಿಯಲ್ಲಿದ್ದೂ ವಿಚಾರಣೆಗೆ ಸಹಕರಿಸದ ಆರೋಪ ಇದೆ. ಈ ಕಾರಣಗಳಿಂದ ಸದ್ಯ ರಾಗಿಣಿಗೆ ಜಾಮೀನು ಕನಸಿನ ಮಾತಾಗಿದೆ.