– ರಾಜ್ಯದಲ್ಲಿ ಕೊರೊನಾ ಮ’ರಣ’ ಕೇಕೆ
– 21 ಸಾವು, 2,975 ಹೊಸ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿಂದು ಕೊರೊನಾ ಮರಣ ಕೇಕೆ ಹಾಕಿದ್ದು, ಒಂದೇ ದಿನ 21 ಜನರನ್ನ ಬಲಿ ಪಡೆದುಕೊಂಡಿದೆ. ಇವತ್ತು 2,975 ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, 1,262 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ 9,92,779ಕ್ಕೆ ಏರಿಕೆಯಾಗಿದ್ದು, 25,541 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,541ಕ್ಕೇರಿಕೆಯಾಗಿದೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ 240 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.2.78 ಮತ್ತು ಮರಣ ಪ್ರಮಾಣ ಶೇ.0.71ರಷ್ಟು ದಾಖಲಾಗಿದೆ. ಇಂದು 1,06,917 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯ ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇವತ್ತು 1,984 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇಂದಿನ 21 ಸಾವುಗಳ ಪೈಕಿ 11 ಜನ ಬೆಂಗಳೂರಿನಲ್ಲಿಯೇ ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 48, ಬೆಳಗಾವಿ 19, ಬೆಂಗಳೂರು ಗ್ರಾಮಾಂತರ 66, ಬೆಂಗಳೂರು ನಗರ 1,984, ಬೀದರ್ 102, ಚಾಮರಾಜನಗರ 3, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರು 14, ಚಿತ್ರದುರ್ಗ 19, ದಕ್ಷಿಣ ಕನ್ನಡ 47, ದಾವಣಗೆರೆ 9, ಧಾರವಾಡ 24, ಗದಗ 14, ಹಾಸನ 57, ಹಾವೇರಿ 0, ಕಲಬುರಗಿ 156, ಕೊಡಗು 1, ಕೋಲಾರ 21, ಕೊಪ್ಪಳ 15, ಮಂಡ್ಯ 34, ಮೈಸೂರು 111, ರಾಯಚೂರು 12, ರಾಮನಗರ 13, ಶಿವಮೊಗ್ಗ 32, ತುಮಕೂರು 43, ಉಡುಪಿ 53, ಉತ್ತರ ಕನ್ನಡ 40, ವಿಜಯಪುರ 15 ಮತ್ತು ಯಾದಗಿರಿಯಲ್ಲಿ 7 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.
ಬೇಕಾಬಿಟ್ಟಿ ಪಾರ್ಟಿ ಮಾಡಿದ್ದೇ ಕೊರೊನಾ ಸ್ಫೋಟಕ್ಕೆ ಕಾರಣ?- ಮಣಿಪಾಲದಲ್ಲಿ ಸುಧಾಕರ್ ಗುಮಾನಿhttps://t.co/G0IcHPRmqE#Manipal #CoronaVirus #COVID19 #KannadaNews #Students #Sudhakar #Udupi @mla_sudhakar
— PublicTV (@publictvnews) March 30, 2021