ಇಂದಿನಿಂದ ಆಗಸ್ಟ್ 15ರವರೆಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಟ್

Public TV
4 Min Read
Electricity

ಬೆಂಗಳೂರು: ನಿಗದಿತ ನಿರ್ವಹಣಾ ಕಾರ್ಯದಿಂದಾಗಿ ಇಂದಿನಿಂದ ಆಗಸ್ಟ್ 15ರವರೆಗೆ ಜಯನಗರ ಉಪವಿಭಾಗದ ಅಡಿಯಲ್ಲಿ ಬರುವ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಎಸ್‍ಜೆ ಪಾರ್ಕ್, ಕಿಮ್ಸ್, ಸಿಟಿ ಮಾರ್ಕೆಟ್, ಬಿವಿಕೆ. ಅಯ್ಯಂಗಾರ್ ರಸ್ತೆ. ಆರ್‍ಟಿ ರಸ್ತೆ, ಸಿಟಿ ರೋಡ್, ಚಿಕ್ಕಪೇಟೆ, ಎಸ್.ಪಿ ರೋಡ್, ಟೌನ್ ಹಾಲ್, ಜೆಸಿ ರಸ್ತೆ, ಕೆಜಿ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ, ಎಂಎಂ ರೋಡ್, ಶಂಕರಪುರ ಮತ್ತು ಮೆಡಿಕಲ್ ಕಾಲೇಜು ರಸ್ತೆಗಳಲ್ಲಿ ವಿದ್ಯುತ್ ಪೂರೈಕೆಯ ಅಡಚಣೆ ಉಂಟಾಗಲಿದೆ.

ಆಗಸ್ಟ್ 9 ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಪದ್ಮನಾಭನಗರ ಪ್ರದೇಶಗಳು, ವಿವೇಕಾನಂದ ನಗರ, ಕತ್ರಿಗುಪ್ಪೆ ಪೂರ್ವ, ಬನಶಂಕರಿ ಹಂತ 3, ಪುಟ್ಟೇನಹಳ್ಳಿ ವೃತ್ತ, ಬನಶಂಕರಿ ಹಂತ 5, ಜೆ.ಪಿ ನಗರ 6ನೇ ಹಂತ, ಕೆ.ಆರ್ ಲೇಔಟ್ ಪುಟ್ಟೇನಹಳ್ಳಿ ಕೆರೆ, ಅಶ್ವಥ್ ನಾರಾಯಣ್ ಲೇಔಟ್, ಅಣ್ಣಯ್ಯ ರೆಡ್ಡಿ ಲೇಔಟ್, ಕಾವೇರಿ ನಗರದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಆಗಸ್ಟ್ 10 ರಂದು ಆಗಸ್ಟ್ 10 ರಂದು ಪದ್ಮನಾಭನಗರ, ನಾಗಾರ್ಜುನ ಎನ್ಕ್ಲಾವ್, ಆರ್ಚಳ್ಳಿ ಮುಖ್ಯ ರಸ್ತೆ, ಕೆಇಬಿ ಲೇಔಟ್, ರಾಮರಾವ್ ಲೇಔಟ್, ಬನಶಂಕರಿ ಹಂತ 2 ಸಿಂಧೂರ್ ಚೌಲ್ಟ್ರಿ, ಜರಗನಹಳ್ಳಿಯ 1 ಮತ್ತು 6 ಹಂತಗಳು, ಇಟ್ಟಮಾಡು, ಕತ್ರಿಗುಪ್ಪೆ ಮುಖ್ಯ ರಸ್ತೆ ವಿದ್ಯುತ್ ಪೂರೈಕೆಯಲಿ ವ್ಯತ್ಯಾಸ ಉಂಡಾಗಲಿದೆ.

ಆಗಸ್ಟ್ 11, 12 ಮತ್ತು 13 ರಂದು ಸುದಮ್ ನಗರ, ಜರಗನಹಳ್ಳಿ ಸಿ.ಎಸ್ ಲೇಔಟ್, ನಾಯ್ಡು ಲೇಔಟ್, ಬಸವರಾಜು ಲೇಔಟ್, ಅಯ್ಯಪ್ಪ ದೇವಸ್ಥಾನ, ಜೆಪಿ ನಗರ 2, 3 ಮತ್ತು 5ನೇ ಹಂತಗಳು, ಭುವನೇಶ್ವರಿ ನಗರ, ಇಟ್ಟಮಾಡು, ಸಿದ್ದಣ್ಣ ಲೇಔಟ್, ಶ್ರೀನಿಧಿ ಲೇಔಟ್, ಚುಂಚನಘಟ್ಟ ಗ್ರಾಮ, ಜೆ.ಪಿ ನಗರ 5ನೇ ಹಂತ, ಕಾಮಾಕ್ಯ ಲೇಔಟ್, 100 ಫೀಟ್ ರಿಂಗ್ ರೋಡ್, ಕೃಷ್ಣಪ್ಪ ಲೇಔಟ್, ಭುವನೇಶ್ವರಿ ನಗರ ಮತ್ತು ಪದ್ಮನಾಭನಗರ ಭಾಗಗಳಲ್ಲಿ ವಿದ್ಯುತ್ ಕಡಿತವನ್ನು ನಿಗದಿಪಡಿಸಲಾಗಿದೆ.

ಆಗಸ್ಟ್ 14 ಮತ್ತು 15ರಂದು ಕರ್ನಾಟಕ ಬ್ಯಾಂಕ್ ರಸ್ತೆ, ಪದ್ಮನಾಭನಗರ ಬಿಡಬ್ಲ್ಯೂಎಸ್‍ಎಸ್‍ಬಿ ಕಚೇರಿ, ಹಳ್ಳಿ ಎಸ್‍ಬಿಎಂ ರಸ್ತೆ, ಎಚ್ ಸಿದ್ದಯ್ಯ ರಸ್ತೆ ಇತ್ಯಾದಿ ಪ್ರದೇಶಗಳು ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ.  ಇದನ್ನೂ ಓದಿ:ಮಾಹಿತಿ ಇಲ್ಲದೇ ಕಾರ್ಯಕ್ರಮಕ್ಕೆ ಬಂದ ಅಧಿಕಾರಿಗಳಿಗೆ ವಿ.ಸೋಮಣ್ಣ ಕ್ಲಾಸ್

Share This Article
Leave a Comment

Leave a Reply

Your email address will not be published. Required fields are marked *