ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಚಿಕಿತ್ಸೆ ಸಿಗದೆ ತುಂಬು ಗರ್ಭಿಣಿ ನಡುರಾತ್ರಿ ನರಕಯಾತನೆ ಅನುಭವಿಸಿದ ಘಟನೆ ಬೆಂಗಳೂರಿನ ಸಿಂಗಸಂದ್ರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ಡೋರ್ ಕ್ಲೋಸ್ ಮಾಡಿ ಕ್ವಾಟ್ರರ್ಸ್ ನಲ್ಲೇ ವೈದ್ಯರು ಜಿಂಗಲಾಲ ಮಾಡಿದ್ದಾರೆ. ಕರ್ತವ್ಯಕ್ಕೆ ಚಕ್ಕರ್ ಹೊಡೆದು ಆಸ್ಪತ್ರೆಯನ್ನ ಕ್ಲೋಸ್ ಮಾಡಿಕೊಂಡು ವೈದ್ಯರು ಹೋಗಿದ್ದಾರೆ. ಈ ಮೂಲಕ ಕರ್ತವ್ಯ ಪ್ರಜ್ಞೆ ಮರೆತಿದ್ದಾರೆ.
ಇತ್ತ ಸರ್ಕಾರಿ ಆಸ್ಪತ್ರೆ ಮುಂದೆ ಮಧ್ಯರಾತ್ರಿ ಒಂದು ಗಂಟೆ ಕಾಲ ನರಳಾಡಿದ ಗರ್ಭಿಣಿಗೆ ವಿಪರೀತ ಹೆರಿಗೆ ನೋವುಂಟಾಗಿ ನಡುರಸ್ತೆಯಲ್ಲೇ ಹೆರಿಗೆಯಾಗಿದೆ. ತಾಯಿ-ಮಗುವಿನ ಕರುಳ ಬಳ್ಳಿ ಬಿಡಿಸದೆ ರಕ್ತಸ್ರಾವದ ಮಧ್ಯೆಯೇ ಮತ್ತೊಂದು ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದಿದ್ದಾರೆ.
ಆಸ್ಪತ್ರೆಯ ಪಕ್ಕದಲ್ಲಿದ್ದ ಅಂಬುಲೆನ್ಸ್ ಡ್ರೈವರ್ ಗಳು ತಾಯಿ- ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸಿಕೊಡಲು ಸಹಾಯ ಮಾಡಿದ್ದಾರೆ. ಈ ಮೂಲಕ ಇಬ್ಬರನ್ನು ರಕ್ಷಿಸಲಾಗಿದೆ.