ಆರ್ಥಿಕ ಸಂಕಷ್ಟ- ಪತ್ನಿ, ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿ ಪತಿ ಎಸ್ಕೇಪ್

Public TV
1 Min Read
bly husband 1

-ಮಕ್ಕಳು ಸಾವು, ಪತ್ನಿ ಬಚಾವ್

ಬಳ್ಳಾರಿ: ಆರ್ಥಿಕ ಸಂಕಷ್ಟದಿಂದಾಗಿ ವ್ಯಕ್ತಿಯೋರ್ವ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೆರೆಗೆ ತಳ್ಳಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಕ್ಕಳಿಬ್ಬರು ಶವಕ್ಕಾಗಿ ಶೋಧ ಕಾರ್ಯ ನಡೆದಿದೆ.

bly husband

ಚಿರಂಜೀವಿ ಪತ್ನಿ ಮತ್ತು ಮಕ್ಕಳನ್ನು ಕೆರೆಗೆ ದೂಡಿದ ವ್ಯಕ್ತಿ. ಚಿರಂಜೀವಿ ಕೊಟ್ಟರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅತಿಯಾದ ಖಾಸಗಿ ಸಾಲ ಮಾಡಿಕೊಂಡಿದ್ದನು. ಮಂಗಳವಾರ ಸಂಬಂಧಿಕರ ಮದುವೆಗೆ ಚಿರಂಜೀವಿ ಕುಟುಂಬ ಸಮೇತನಾಗಿ ತೆರಳಿದ್ದನು. ಮದುವೆಯಿಂದ ಗ್ರಾಮಕ್ಕೆ ಹಿಂದಿರುಗುವ ಮಾರ್ಗ ಮಧ್ಯೆ ರಾಮದುರ್ಗದ ಕೆರೆಯ ಬಳಿ ಬೈಕ್ ನಿಲ್ಲಿಸಿದ್ದಾನೆ. ಕೆರೆಯ ಬಳಿ ಎಲ್ಲರನ್ನು ಕರೆದುಕೊಂಡು ಹೋಗಿ ತಳ್ಳಿ ಪರಾರಿಯಾಗಿದ್ದಾನೆ.

vlcsnap 2020 08 12 09h45m51s324

ನಾಲ್ಕು ವರ್ಷದ ಹಿಂದೆ ಚಿರಂಜೀವಿ ಮತ್ತು ನಂದಿನಿ ಮದುವೆಯಾಗಿದ್ರು. ಇತ್ತೀಚೆಗೆ ಕುಟುಂಬ ನಿರ್ವಹಣೆಗಾಗಿ ಚಿರಂಜೀವಿ ಸ್ಥಳೀಯವಾಗಿ ಸಾಲ ಮಾಡಿಕೊಂಡಿದ್ದನು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕ ಗುಡೇಕೋಟೆ ಪಿಎಸ್‍ಐ ರಾಮಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಬ್ಬರ ಮೃತದೇಹಕ್ಕಾಗಿ ಶೋಧ ಮುಂದುವರಿದಿದ್ದು, ಈ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *