ಆರು ಕುರಿ ಬಲಿ- ಲಾಕ್‍ಡೌನ್‍ನಲ್ಲೂ ನಿಲ್ಲದ ಧಾರ್ಮಿಕ ಆಚರಣೆಗಳು

Public TV
1 Min Read
Raichur Superstition

ರಾಯಚೂರು: ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ ಜಿಲ್ಲಾಡಳಿತಕ್ಕೆ ಮಾತ್ರ ಸಿಮಿತವಾಗಿದೆ, ಜನ ತಲೆಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ದೇವರಿಗೆ ಹರಕೆ ತೀರಿಸಲು ನಗರದ ತಹಶೀಲ್ದಾರ್ ಕಚೇರಿ ಮುಂದೆಯೇ ಕುರಿಬಲಿ ಕೊಟ್ಟಿದ್ದಾರೆ.

Raichur Superstition4

ಬೆಳಗಿನ ಜಾವ ಡೊಳ್ಳು, ನಗಾರಿ ಸಹಿತ ಮೆರವಣಿಗೆ ಬಂದು ಆರು ಕುರಿಗಳನ್ನ ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಲಾಕ್‍ಡೌನ್ ವೇಳೆ ಧಾರ್ಮಿಕ ಆಚರಣೆಗಳಿಗೆ ನಿಷೇಧವಿದ್ದರೂ ನಿಷೇಧಿತ ಮೂಢನಂಬಿಕೆ ಆಚರಣೆಗಳಿಗೆ ಜನ ಮುಂದಾಗಿದ್ದಾರೆ. ತಹಶಿಲ್ದಾರ್ ಕಚೇರಿ ಮುಂದೆ 6 ಕಡೆಗಳಲ್ಲಿ ರಕ್ತದ ಗುರುತುಗಳು ಇದ್ದು. ಬೇವಿನ ಸೊಪ್ಪು, ಕುಂಕುಮ, ಬಲಿ ಪೂಜೆ ಮಾಡಿರುವ ಎಲ್ಲಾ ಗುರುತುಗಳಿವೆ.

Raichur Superstition4 1

ಹಕರೆ ತೀರಿಸಲು ನಡು ರಸ್ತೆಯಲ್ಲಿ ಕುರಿಬಲಿ ನೀಡಿರುವ ಭಕ್ತರು ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ. ಈಗ ಮದುವೆ ಮುಹೂರ್ತಗಳು ಹೆಚ್ಚಾಗಿರುವುದರಿಂದ ಮದುವೆ ನಿಶ್ಚಯವಾದವರು, ಮದುವೆಯಾದವರು ಮಾರೆಮ್ಮ, ಜಮಲಮ್ಮದೇವಿಗೆ ಹರಕೆ ತೀರಿಸಲು ಕುರಿ ಬಲಿ ನೀಡುತ್ತಾರೆ. ಪ್ರಾಣಿಗಳ ಬಲಿ ನಿಷೇಧವಿದ್ದರೂ ರಾಯಚೂರಿನಲ್ಲಿ ಮಾತ್ರ ಪದ್ದತಿ ಮುಂದುವರೆದಿದೆ.

Share This Article
Leave a Comment

Leave a Reply

Your email address will not be published. Required fields are marked *