ಮೈಸೂರು: ಮೈಸೂರು ಮೃಗಾಲಯ ನೂತನ ಪ್ರಯೋಗ ಮಾಡಿದ್ದು, ಆನೆಗಳ ಆರೋಗ್ಯದ ದೃಷ್ಟಿಯಿಂದ ಆನೆಗಳಿಗಾಗಿಯೇ ಈಜುಕೊಳ ನಿರ್ಮಾಣ ಮಾಡಿದೆ.
ವಯಸ್ಸಾದ ಆನೆಗಳಿಗೆ ಸಾಮಾನ್ಯವಾಗಿ ಕಂಡು ಬರುವ ಸಂದಿವಾತ ನೋವು ನಿವಾರಣೆ ಚಿಕಿತ್ಸೆಗಾಗಿ ಈಜುಕೊಳ ನಿರ್ಮಾಣ ಮಾಡಿದ್ದು, ರಾಜ್ಯದಲ್ಲೇ ಮೊದಲ ಪ್ರಯತ್ನ ಇದಾಗಿದೆ. ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಈಜುಕೊಳ ನಿರ್ಮಾಣವಾಗಿದ್ದು, ಪ್ರಾಯೋಗಿಕವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆವಾಗುತ್ತಿದೆ.
ಆನೆಗಳ ಆರೋಗ್ಯ ಹಿತದೃಷ್ಟಿಯಿಂದ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆನೆಗಳು ಸ್ವಿಮ್ಮಿಂಗ್ ಪೂಲ್ನಲ್ಲಿ ಕಾಲ ಕಳೆಯುತ್ತಿವೆ. ಆನೆಗಳಿಗೆ ಬರುವ ಸಂದಿವಾತವನ್ನು ತಪ್ಪಿಸಲು ಈ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ.