ಕಾರವಾರ: ಅರಣ್ಯದಲ್ಲಿ ಹುದುಗಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಅಬಕಾರಿ ಅಧಿಕಾರಿಗಳು ಮಾಜಾಳಿ ಬಳಿಯ ಸೈಲ್ ಎಂಜಿನಿಯರಿಂಗ್ ಕಾಲೇಜು ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ 6,70,800 ರೂಪಾಯಿ ಮೌಲ್ಯದ 1,422 ಲೀಟರ್ ಗೋವಾ ಮದ್ಯ, 228 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತಾಗಿ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಅಬಕಾರಿ ಉಪ ಆಯುಕ್ತರಾದ ಶಿವನಗೌಡ ಪಾಟೀಲ್ ಇವರ ಮಾರ್ಗ ದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸುವರ್ಣ ಬಾಯಿ, ಕಾರವಾರ ವಲಯ ನಿರೀಕ್ಷಕರಾದ ದಯಾನಂದ್, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ಬಸವರಾಜ್ ಕರವಿನ ಕೊಪ್ಪ, ಸಿಬ್ಬಂದಿ ಶಿವಾನಂದ ಕೊರಡಿ, ಚಂದ್ರಶೇಖರ್ ಪಾಟೀಲ್ ,ಪ್ರವೀಣ್ ,ವೀರೇಶ್ ನಾಗರಾಜ್ ,ಶ್ರೀನಿವಾಸ್,ರವಿ ನಾಯ್ಕ, ಇಮ್ತಿಯಾಜ್ ಇದ್ದರು.