– ರಾತ್ರಿಯಿಡೀ ಹಸಿವಿನಿಂದ ಕಣ್ಣೀರಿಟ್ಟ ಕಂದಮ್ಮ
ಡೆಹಾರಡೂನ: ಅರಣ್ಯದಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ ಹೃಷಿಕೇಶ್ ವ್ಯಾಪ್ತಿಯ ಲಕ್ಷ್ಮಣ ಝೂಲಾ ಯಮಕೇಶ್ವರ ಪ್ರಖಂಡ ನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಗ್ರಾಮಸ್ಥರು ಅರಣ್ಯ ಮಾರ್ಗವಾಗಿ ತೆರಳುತ್ತಿರುವ ಮಗು ಅಳುತ್ತಿರುವ ಧ್ವನಿ ಕೇಳಿದೆ. ಅರಣ್ಯದೊಳಗೆ ಹೋಗಿ ನೋಡಿದಾಗ ಬಟ್ಟೆಯಲ್ಲು ಸುತ್ತಿದ್ದ ನವಜಾತ ಹೆಣ್ಣು ಕಂದಮ್ಮ ಸಿಕ್ಕಿದೆ. ಮಗುವನ್ನ ಅರಣ್ಯದಿಂದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಹ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಲಕ್ಷ್ಮಣ ಝೂಲಾ ಠಾಣೆಯ ಹಿರಿಯ ಅಧಿಕಾರಿ ಯಶವಂತ್ ಬಿಷ್ಠ, ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡು ಗ್ರಾಮಸ್ಥರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪತ್ತೆಯಾದ ಕಂದಮ್ಮ ಎರಡು ದಿನದ ಕೂಸು ಎಂದು ತಿಳಿದಿದ್ದು, ಹಸಿವಿನಿಂದ ರಾತ್ರಿಯಿಡೀ ಅತ್ತಿದ್ದರಿಂದ ಅದರ ಆರೋಗ್ಯದಲ್ಲಿ ಏರುಪೇರಾಗಿತ್ತು. ಪೊಲೀಸರು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.