ಅಮ್ಮಾ, ನಿಮ್ಮ ಅಳಿಯ ಒಳ್ಳೆಯವನಲ್ಲ: ಆತ್ಮಹತ್ಯೆಗೆ ಶರಣಾದ ಗೃಹಿಣಿ

Public TV
1 Min Read
Mys Woman Suicide 4

– ಮಕ್ಕಳನ್ನ ಗಂಡನ ಜೊತೆ ಕಳುಹಿಸಬೇಡ
– ತವರಿನಲ್ಲಿದ್ರೆ ನಿಮಗೂ ಅವಮಾನ, ಕ್ಷಮಿಸು ಅಮ್ಮ

ಮೈಸೂರು: ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಗೃಹಿಣಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯಲ್ಲಿ ಡೆತ್ ನೋಟ್ ಲಭ್ಯವಾಗಿದೆ.

Mys Woman Suicide 2

ಬಿಂದುಶ್ರೀ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಏಳು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸಿಕೆರೆಯ ಚಂದ್ರಶೇಖರ್ ಜೊತೆ ಬಿಂದುಶ್ರೀಯನ್ನ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಚಂದ್ರಶೇಖರ್ ಪತ್ನಿತಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳದಿಂದ ಬೇಸತ್ತ ಬಿಂದುಶ್ರೀ ಕೆಲ ದಿನಗಳ ಹಿಂದೆ ತವರು ಸೇರಿದ್ದರು. ಇತ್ತೀಚೆಗೆ ಕೆ.ಆರ್.ನಗರಕ್ಕೆ ಬಂದಿದ್ದ ಚಂದ್ರಶೇಖರ್ ಪತ್ನಿಯನ್ನ ಕಳುಹಿಸಿ ಕೊಡಿ. ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಭರವಸೆ ನೀಡಿದ್ದನು.

Mys Woman Suicide 1

ಡೆತ್‍ನೋಟ್ ನಲ್ಲಿ ಏನಿದೆ?: ಅಮ್ಮ ನಾನು ಇರೋದು ನಿನಗೆ ಇಷ್ಟ ಇಲ್ಲ. ಅಲ್ಲಿಗೆ ಹೋದ್ರೆ ಚೆನ್ನಾಗಿ ನೋಡಿಕೊಳ್ಳಲ್ಲ, ಮತ್ತೆ ಹಿಂಸೆ ಕೊಡುತ್ತಾನೆ. ಹೋಗಲ್ಲ ಅಂದ್ರೆ ಹಿಂಸೆ ಮಾಡಿ ಕಳುಹಿಸುತ್ತಿದ್ದೀರಿ. ಹೋದ್ರೆ ದಿನ ದಿನ ಸಾಯೋದಕ್ಕೆ ನನಗೆ ಆಗಲ್ಲ. ಹಾಗಾಗಿ ಒಂದೇ ದಿನ ಸಾಯೋದು ಒಳ್ಳೆಯದಲ್ವಾ? ಮತ್ತೆ ನಾನು ಸತ್ತನೆಂದು ಮಕ್ಕಳನ್ನ ಅವನ ಜೊತೆ ಕಳುಹಿಸಬೇಡ. ನನ್ನಿಂದ ನಿಮಗೆ ತುಂಬಾ ಬೇಜಾರು ಆಗಿದೆ ಅಂತ ಗೊತ್ತು. ನನ್ನಿಂದ ನಿಮ್ಮ ಮರ್ಯಾದೆ ಸಹ ಹಾಳಾಗಿದೆ.

Mys Woman Suicide 3

ನೀವು ಚೆನ್ನಾಗಿರಬೇಕು ಅಷ್ಟೆ. ಅವನು ನೀವು ಅಂದುಕೊಂಡಿರುವಷ್ಟು ಒಳ್ಳೆಯವನಲ್ಲ. ಅಲ್ಲಿ ಹೋಗಿ ದಿನ ಸಾಯೋದಕ್ಕಿಂತ ಒಂದೇ ದಿನ ಸಾಯುತ್ತಿದ್ದೇನೆ. ಈ ತರ ಮಾಡ್ತೀರೋದಕ್ಕೆ ದಯವಿಟ್ಟು ಕ್ಷಮಿಸಿ. ನನ್ನನ್ನು ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ಪ್ಲೀಸ್ ಅಮ್ಮ. ಆ ಆ್ಯಮ್ ಸಾರಿ ಅಮ್ಮ..

Mys Woman Suicide 2

ಚಂದ್ರಶೇಖರ್ ಭರವಸೆ ನೀಡಿದ್ದರಿಂದ ಬಿಂದುಶ್ರೀಯನ್ನ ಕಳುಗಹಿಸಲು ಒಪ್ಪಿದ್ದರು. ಆದ್ರೆ ಪತಿಯ ಬಗ್ಗೆ ಗೊತ್ತಿದ್ದ ಬಿಂದುಶ್ರೀ ಅವರಿಗೆ ಅರಸಿಕೆರೆಗೆ ಹೋಗಲು ಇಷ್ಟವಿರಲಿಲ್ಲ. ತವರಿನಲ್ಲಿಯೇ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *