ಲಕ್ನೋ: ಅಬಕಾರಿ ಇಲಾಖೆ ಅಧಿಕಾರಿಗಳು ಉತ್ತರ ಪ್ರದೇಶದ ಗೋರಖ್ಪುರದ ಹಲವು ಕಡೆಗಳಲ್ಲಿ ದಾಳಿ ಮಾಡಿ 450 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.
ಗೋರಖ್ಪುರ್ ನ ಹಲವು ಭಾಗಗಳಲ್ಲಿ ಎಗ್ಗಿಲ್ಲದೆ ಕಳ್ಳಭಟ್ಟಿ ತಯಾರಿಕೆಯ ದಂಧೆ ನಡೆಯುತ್ತಿತ್ತು. ಈ ಕುರಿತು ಮಾಹಿತಿ ಪಡೆದು ಅಬಕಾರಿ ಅಧಿಕಾರಿ ರಾಕೇಶ್ ತಿರುಪತಿ ಅವರ ತಂಡ ದಾಳಿ ಮಾಡಿ ಕಳ್ಳಬಟ್ಟಿ ಸಾರಾಯಿಯೊಂದಿಗೆ ತಯಾರಿಕೆಗಾಗಿ ಬಳಸುತ್ತಿದ್ದ 14 ರಿಂದ 15 ಕಿ.ಗ್ರಾಂ. ನಷ್ಟು ಲಹಾನ್ನ್ನು ಮುಟ್ಟುಗೋಲು ಹಾಕಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮಕ್ಕೆ ವಿವರಿಸಿದ ಅಬಕಾರಿ ಅಧಿಕಾರಿ ರಾಕೇಶ್ ತಿರುಪತಿ ದಾಳಿಯ ವೇಳೆ 450 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 14ರಿಂದ 15 ಕಿ.ಗ್ರಾಂ ಲಹಾನ್ನ್ನು ಕೈ ವಶ ಮಾಡಿಕೊಂಡು ನಾಶ ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸ್ಥಳೀಯಾ ಮಾಧ್ಯಮಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ವಶಪಡಿಸಿಕೊಂಡಿರುವ ಸಾರಾಯಿ ಮತ್ತು ಲಹಾನ್ನ್ನು ಜೆಸಿಬಿ ಬಳಸಿ ಮಣ್ಣಿನಡಿಯಲ್ಲಿ ಹೂತು ಹಾಕಲಾಗಿದೆ ಎಂದು ವರದಿಯಾಗಿದೆ.