ಬೆಂಗಳೂರು: ಲಾಕ್ಡೌನ್ ರಿಲ್ಯಾಕ್ಸ್ ಎಲ್ಲ ವಲಯಕ್ಕೂ ಬೇಕಾಗಿದೆ. ಅದರಲ್ಲೂ ಆರ್ಥಿಕ ಚೇತರಿಕೆಗಾಗಿ ಬೇಡಿಕೆಗಳ ಸರಮಾಲೆ ಬರುತ್ತಿದೆ. ಸದ್ಯ ಬಿಬಿಎಂಪಿ ಈ ರೀತಿ ಆರ್ಥಿಕ ಚೇತರಿಕೆ ಹಾಗೂ ಕೊರೊನಾ ಮುನ್ನಚ್ಚರಿಕೆ ಎರಡನ್ನು ಆಧಾರವಾಗಿಸಿ ಏನೆಲ್ಲ ಓಪನ್ ಮಾಡಲು ಅವಕಾಶ ಇದೆ, ಯಾವುದೆಲ್ಲ ಬೇಡ ಅಂತ ಪಟ್ಟಿ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದೆ.
ನಗರದಲ್ಲಿ ಈ ಸಂಬಂಧ ಬಿಬಿಎಂಪಿ ಚೀಫ್ ಕಮೀಷನರ್ ಗೌರವ್ ಗುಪ್ತಾ ಮಾತನಾಡಿ, ಅನ್ ಲಾಕ್ 2.0 ಜಾರಿ ವಿಚಾರವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ಅನ್ ಲಾಕ್ ಅದ ಮೇಲೆ ಸೋಂಕಿನ ಕಡೆ ಹೆಚ್ಚಿನ ಗಮನ ಹರಿಸಿದ್ವಿ. ನಾಲ್ಕೈದು ದಿನಗಳಿಂದ ಸೋಂಕಿನ ಪ್ರಮಾಣ ಯಥಾಸ್ಥಿತಿ ಇದೆ. ಜನ ಸಾಮನ್ಯರ ಜೀವನ ಸಹಜ ಸ್ಥಿತಿಗೆ ತರಬೇಕಿದೆ. ಇಂದು ಸಿಎಂ ಜತೆ ಅನ್ಲಾಕ್ ಬಗ್ಗೆ ಚರ್ಚೆ ಆಗುತ್ತದೆ. ಅಂಗಡಿ, ಕೈಗಾರಿಕೆಗಳನ್ನ ಆರಂಭಿಸೋ ಬಗ್ಗೆ ಚಿಂತನೆ ಇದೆ ಎಂಬ ಅಂಶವನ್ನು ಹೇಳಿದರು.
ಬಸ್ ಗಳನ್ನ ಓಡಿಸೋ ಬಗ್ಗೆಯೂ ಚಿಂತನೆ ಇದೆ. ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ. ಹೊಟೇಲ್ ಗಳಲ್ಲಿ ಕೂತು ಊಟ ಮಾಡುವ ಬಗ್ಗೆಯೂ ಇಂದು ನಿರ್ಧಾರವಾಗಲಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್, ಮಾರ್ಕೇಟ್ ಆರಂಭಿಸುವ ಕುರಿತು ಇಂದು ನಿರ್ಧಾರ ಹೊರಬೀಳಬೇಕಾಗಿದೆ. ಮಾಲ್, ಸಿನೆಮಾ ಮಂದಿರಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಮಾಲ್, ಸಿನೆಮಾ ಮಂದಿರ ನಷ್ಟದಲ್ಲಿದೆ ಅಂತ ಓಪನ್ ಮಾಡಿದ್ರೆ ಕಷ್ಟವಾಗುತ್ತದೆ ಎಂದರು. ಇದನ್ನೂ ಓದಿ: ಅನ್ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ
ಯಾವುದೇ ಹೆಜ್ಜೆ ಇಡಬೇಕು ಅಂದರೆ ಅತ್ಯಂತ ಜಾಗರೂಕರಾಗಿ ಇಡಬೇಕಿದೆ. ಹೀಗಾಗಿ ಸದ್ಯಕ್ಕೆ ಈ ವಿನಾಯಿತಿ ಬಗ್ಗೆ ಪ್ರಸ್ತಾಪ ನೀಡಿಲ್ಲ. ವಾಣಿಜ್ಯ ಚಟುವಟಿಕೆ ನಷ್ಟದಲ್ಲಿದೆ ಎಂಬ ಕಾರಣಕ್ಕೆ ಆಸ್ತಿ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಕಾರಣ ಮುಖ್ಯಮಂತ್ರಿಗಳು ಬಹುತೇಕ ವಲಯಗಳಿಗೆ ಪ್ಯಾಕೇಜ್ ಘೋಷಿಸಿದ್ದಾರೆ ಎಂದರು.