ದಾವಣಗೆರೆ: ಹೊನ್ನಾಳಿ ತಾಲೂಕಿನ ಕೃಷಿಕರ ತೋಟದಲ್ಲಿರುವ ಅಡಿಕೆ ಮರದ ಹೊಂಬಾಳೆಯಲ್ಲಿ ಗಣೇಶ ಮೂಡಿ ಬಂದಿದ್ದಾನೆ.
ಗಿರೀಶ್ ಎಂಬವರ ಅಡಿಕೆ ತೋಟದಲ್ಲಿರುವ ಅಡಿಕೆ ಮರದಲ್ಲಿಗಣೇಶ ಮೂಡಿ ಬಂದಿದ್ದು, ಇದನ್ನು ವೀಕ್ಷಿಸಲು ಎರೇಹಳ್ಳಿ ಅಕ್ಕಪಕ್ಕದ ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ. ಮರದಲ್ಲಿ ಮೂಡಿರುವ ಗಣೇಶನನ್ನು ಕಣ್ತುಂಬಿಕೊಳ್ಳಲು ಭಕ್ತಿಯಿಂದ ಭಕ್ತರು ಆಗಮಿಸುತ್ತಿದ್ದಾರೆ.
ಅಡಿಕೆ ಮರದಲ್ಲಿ ಮೂಡಿ ಬಂದಿರುವ ಈ ಗಣೇಶನ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.