ಅಂಫಾನ್ ಬಳಿಕ ಜನರ ಪ್ರತಿಭಟನೆ- ನನ್ನ ತಲೆ ಕತ್ತರಿಸಿಕೊಳ್ಳಿ ಎಂದ ಮಮತಾ ಬ್ಯಾನರ್ಜಿ

Public TV
1 Min Read
Mamata Banerjee PTI Picture

-ಏಕಕಾಲದಲ್ಲಿ ನಾಲ್ಕು ಸವಾಲುಗಳು

ಕೋಲ್ಕತ್ತಾ: ಅಂಫಾನ್ ಚಂಡಮಾರುತ ಬಹುತೇಕರ ಜೀವನವನ್ನೇ ಕಿತ್ತುಕೊಂಡಿದೆ. ಚಂಡಮಾರುತದಿಂದ ಸಂತ್ರಸ್ತರಾಗಿರುವ ಜನ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ರಸ್ತೆಗಳಿದು ಪ್ರತಿಭಟನೆ ನಡೆಸಿದ್ರು. ನಿರಾಶ್ರಿತರ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ, ಬೇಕಾದ್ರೆ ನನ್ನ ತಲೆ ಕತ್ತರಿಸಿಕೊಳ್ಳಿ. ಮತ್ತೆ ಮೊದಲಿನಂತೆ ಮಾಡಲು ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಸ್ವಲ್ಪ ಶಾಂತಿ ಕಾಪಾಡಬೇಕು ಎಂದು ಸಂತ್ರಸ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Mamata Banerjee

ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದ ಜನರ ಬದುಕನ್ನು ಕತ್ತಲಾಗಿಸಿದೆ. ಕೊರೊನಾ ತತ್ತರಕ್ಕೆ ಸಿಲುಕಿದ್ದ ಜನರನ್ನ ಅಂಫಾನ್ ಮತ್ತಷ್ಟು ಕಷ್ಟಕ್ಕೆ ದೂಡಿದೆ. ಅಂಫಾನ್ ಬಳಿಕ ಜನ ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಎರಡು ದಿನಗಳಿಂದ ಶುದ್ಧ ನೀರು, ವಿದ್ಯುತ್ ಸಂಪರ್ಕವಿಲ್ಲದೇ ಬಾಹ್ಯ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಸರ್ಕಾರ ಮೂಲಭೂತ ಸೌಕರ್ಯ ಒದಗಿಸಬೇಕೆಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

amphan cyclone 2

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಕಳೆದ ಎರಡು ದಿನಗಳಿಂದ ನಾವು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಯಾರು ಧೈರ್ಯ ಕಳೆದುಕೊಳ್ಳಬೇಡಿ, ನಿಮ್ಮ ಜೊತೆ ನಾವಿದ್ದೇವೆ. ಸುಮಾರು 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂದ್ರು.

amphan cyclone main

ನಾವು ಏಕಕಾಲದಲ್ಲಿ ಕೋವಿಡ್-19, ಲಾಕ್‍ಡೌನ್, ಪ್ರವಾಸಿ ಕಾರ್ಮಿಕರು ಮತ್ತು ಅಂಫಾನ್ ಸೈಕ್ಲೋನ್ ನಾಲ್ಕು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ಜನತೆ ಸಂಯಮದಿಂದ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *