ಬಿಗ್ಬಾಸ್ ಫಿನಾಲೆಗೆ ದಿನ ಹತ್ತಿರವಾಗುತ್ತಿದೆ ಹೀಗಿರುವಾಗ ಬಿಗ್ಬಾಸ್ ಸ್ಪರ್ಧಿಗಳಿಗೆ ಈ ಮನೆಯಲ್ಲಿ ಈಡೇರದ ಒಂದು ಆಸೆಯನ್ನು ಕೇಳಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ.
ಅಂದುಕೊಂಡಂತೆ ಆಗದೆ ಇರುವ ಜೀವನದಲ್ಲಿ ಎಲ್ಲಾ ಪರಿಸ್ಥಿತಿಗಳಿಗೆ ಹೊಂದಿಕೊಂಡು ಇರಬೇಕು ಎನ್ನುವ ಪಾಠವನ್ನು ಬಿಗ್ಬಾಸ್ ಕಲಿಸಿಕೊಡುತ್ತದೆ. ಇಷ್ಟು ದಿನಗಳ ಕಾಲ ಈ ಮನೆಯಲ್ಲಿ ನೀವು ಹೊಂದಿಕೊಂಡು ಬದುಕಿದ್ದೀರಿ. ಇಷ್ಟು ದಿನ ನಿಮ್ಮ ಕಷ್ಟ, ಸುಖ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೀರ. ಆದರೆ ಯಾವುದೋ ಒಂದು ಆಸೆ, ವಿಷಯ ನಿಮಗೆ ಈಡೇರದೆ ಇರಬಹುದು. ಹೀಗಾಗಿ ಗಾರ್ಡನ್ ಏರಿಯಾದಲ್ಲಿ ಒಂದು ಕಿವಿ ಆಕೃತಿಯನ್ನು ಇರಿಸಲಾಗಿದೆ. ನಿಮ್ಮ ಬೇಡಿಕೆಗಳನ್ನು ಆ ಕಿವಿಯಲ್ಲಿ ಹೇಳಬೇಕು. ನಿಮ್ಮ ಆಸೆ ಈಡೇರಿಸಲು ಸಾಧ್ಯವಾಗುವಂತಿದ್ದರೆ ಬಿಗ್ಬಾಸ್ ಈಡೇರಿಸುತ್ತಾರೆ ಎಂದು ಸೂಚನೆ ನೀಡಿದ್ದಾರೆ.
ವೈಷ್ಣವಿ ಮನೆಯಿಂದ ಒಂದು ಫೋನ್ ಕರೆ ಬರಲಿ. ಬಿಗ್ಬಾಸ್ ಫಿನಾಲೆ ಹತ್ತಿರವಾಗುತ್ತಿದೆ ನಮ್ಮ ನನೆಯವರ ಒಂದು ಆಶಿರ್ವಾದ ಬೇಕು ವೀಡಿಯೋ ಅಥವಾ ವಾಯ್ಸ್ ಕೇಳಿಸಿ ಎಂದು ಮಂಜು ಕೇಳಿಕೊಂಡಿದ್ದಾರೆ. ಅರವಿಂದ್ ನಾನು ಮೊದಲು ಬಿಗ್ಬಾಸ್ ಎಂಟ್ರಿಗೆ ಬಂದಿರುವ ನನ್ನ ಬೈಕ್ ಗಾರ್ಡನ್ ಏರಿಯಾದಲ್ಲಿ ನೋಡಬೇಕು, ಸುದೀಪ್ ಸರ್ ಮಾಡಿರುವ ಅಡುಗೆಯನ್ನು ನಾವು ಸೇವಿಸಬೇಕು ಎಂದು ದಿವ್ಯಾ ಉರುಡುಗ ಕೇಳಿದ್ದಾರೆ. ಸಂಬರಗಿ ನನ್ನ ಫ್ಯಾಮಿಲಿ ಅವರು ಬರಬೇಕು ಎಂದು ಹೀಗೆ ಮನೆ ಮನೆಮಂದಿ ಅವರಿಗೆ ಬೇಕಾಗಿದ್ದನು ಕೇಳಿಕೊಂಡಿದ್ದಾರೆ.
ನನ್ನ ಅಮ್ಮನನ್ನು ಮನೆಗೆ ಕರೆಸಿ ಎಂದು ಕೇಳಬೇಕು ಅಂದುಕೊಂಡಿದ್ದೆ ಆದರೆ ಕೊರೊನಾ ಇರುವ ಕಾರಣ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನು ಮಂಜುಗೆ ಸ್ನೇಹಿತರ ದಿನದ ಶುಭಾಶಯ ತಿಳಿಸಬೇಕು. ಒಂದು ಟೇಬಲ್ ಅದರ ಮೇಲೆ ಕೇಕ್, ಬಲೂನ್. ನಾನು ಮಂಜು ಇರುವ ಒಂದು ಫೋಟೋವನ್ನು ಕಳುಹಿಸಿ ನಾನು ಮಂಜುಗೆ ಧನ್ಯವಾದವನ್ನು ಹೇಳಬೇಕು. ಕೇಕ್ ಹಾರ್ಟ್ ಶೆಪ್ನಲ್ಲಿ ಇರಲಿ. ಥ್ಯಾಂಕ್ಸ್ ಬಿಯಿಂಗ್ ಮೈ ಫ್ರೆಂಡ್ ಎಂದು ಬರೆದು ಕಳುಹಿಸಿ. ಇದು ನಾನು ಹೋಗುವಷ್ಟರಲ್ಲಿ ಸಾಧ್ಯವಾದರೆ ಈಡೇರಿಸಿ ಬಿಗ್ಬಾಸ್ ಎಂದು ಮನವಿ ಮಾಡಿಕೊಂಡಿದ್ದಾರೆ.
ಎಲ್ಲರೂ ಕೇಳಿರುವ ಬೇಡಿಕೆಗಿಂದ ದಿವ್ಯಾ ಅವರ ಬೇಡಿಕೆ ಕೊಂಚ ವಿಭಿನ್ನವಾಗಿದೆ, ಬಿಗ್ಬಾಸ್ ದಿವ್ಯಾ ಸುರೇಶ್ ಅವರ ಬೇಡಿಕೆಯನ್ನು ಈಡೇರಿಸುತ್ತಾರೆ ಎಂದು ಕಾದುನೋಡಬೇಕಿದೆ.