ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಕೇಳಿ ನನಗೆ ಶಾಕ್ ಆಗಿದೆ ಎಂದು ಟೀಂ ಇಂಡಿಯಾ ಆಲ್ರೌಂಡರ್ ಇರ್ಫಾನ್ ಪಠಾಣ್ ನಟನ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಇರ್ಫಾನ್ ಪಠಾಣ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಬಗ್ಗೆ ಕೇಳಿ ನನಗೆ ತುಂಬಾ ಶಾಕ್ ಆಗಿದೆ. ಜೊತೆಗೆ ತುಂಬಾ ನೋವಾಗುತ್ತಿದೆ” ಎಂದು ಸುಶಾಂತ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ, “ನಾನು ಅವರೊಂದಿಗೆ ತಾಜ್ ಹೋಟೆಲ್ ಜಿಮ್ನಲ್ಲಿ ಕೊನೆಯದಾಗಿ ಚಾಟ್ ಮಾಡಿದ್ದೆ. ಆಗ ಕೇದಾರನಾಥದಲ್ಲಿ ಅವರು ಮಾಡಿದ ಕೆಲಸಕ್ಕೆ ನಾನು ಅವರನ್ನು ಹೊಗಳಿದ್ದೆ. ಆಗ ಅವರು ‘ಭಾಯ್ ದಯವಿಟ್ಟು ಚಿಚೋರ್ ನೋಡಿ, ನೀವು ಇಷ್ಟಪಡುತ್ತೀರಿ ಎಂದು ಹೇಳಿದ್ದರು” ಎಂದು ಕೊನೆಯ ಬಾರಿ ಸುಶಾಂತ್ ಜೊತೆ ಚಾಟ್ ಮಾಡಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.
I chatted with him last at the Taj Hotel Gym, I praised him for his work in Kedarnath & his reply was ‘Bhai please do watch chhichhore’ you will love it!
— Irfan Pathan (@IrfanPathan) June 14, 2020
ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.