ದಂಡ ವಿಧಿಸೋ ಮುನ್ನ ನವ ಜೋಡಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ ಅಧಿಕಾರಿಗಳು

Public TV
1 Min Read
HSN 1 2

ಹಾಸನ: ಸಾಮಾಜಿಕ ಅಂತರ ಪಾಲಿಸದ ವಧು-ವರರ ಪೋಷಕರಿಗೆ ಅಧಿಕಾರಿಗಳು ದಂಡ ವಿಧಿಸಿರೋ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸತ್ತಿಗಾಲ ಗ್ರಾಮದಲ್ಲಿ ನಡೆದಿದೆ.

HSN 4 1

ಕೋವಿಡ್ ನಿಯಮ ಸಂಬಂಧ ಸಕಲೇಶಪುರ ತಾಲೂಕು ಪಂಚಾಯತ್ ಅಧಿಕಾರಿ ಹರೀಶ್ ರೌಂಡ್ಸ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮನೆಯೊಂದರ ಬಳಿ ಹೆಚ್ಚು ಜನ ಸೇರಿದ್ದರು. ಈ ವೇಳೆ ಪರಿಶೀಲನೆಗೆಂದು ಹೋದಾಗ ಹೆಚ್ಚು ಮಂದಿ ಸೇರಿ ಮದುವೆ ಮಾಡುತ್ತಿರೋದಾಗಿ ಕಂಡು ಬಂದಿದೆ.

HSN 3 1

ಅಧಿಕಾರಿಗಳು ನವದಂಪತಿಗಳಿಗೆ ಶುಭಹಾರೈಸಿ, ಪೋಷಕರಿಗೆ ದಂಡವಿಧಿಸಿದ್ದಾರೆ. ಅಧಿಕಾರಿಗಳು ಬಂದಾಗ ಮುಹೂರ್ತ ನಡೆಯುತ್ತಿದ್ದರಿಂದ ಅಕ್ಷತೆ ಹಾಕಿ, ವಧುವರರಿಗೆ ತಲಾ ಒಂದು ಸಾವಿರ ದಂಡ ಹಾಕಿದ್ದಾರೆ. ಹೆಚ್ಚು ಜನರು ವಿಧಿಸದಂತೆ ತಾಲೂಕುಪಂಚಾಯತ್ ಇಓ ಎಚ್ಚರಿಕೆ ನೀಡಿದ್ದಾರೆ.

HSN 5

Share This Article