ಮಡಿಕೇರಿ: ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಐವರಲ್ಲಿ ಇಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಂತಹ ಮೃತ ದೇಹದ ಸಹಾಯಕ ಅರ್ಚಕರಾದ ರವಿ ಕಿರಣ್ ಎನ್ನಲಾಗಿದೆ.
ಇಂದು ದೊರೆತಿರುವ ಮೃತದೇಹ ಕೇರಳ ರಾಜ್ಯದಿಂದ ತಲಕಾವೇರಿಗೆ ಸಹಾಯಕ ಅರ್ಚಕ ವೃತ್ತಿಗೆ ಬಂದಿದ್ದ ರವಿ ಕಿರಣ್ ಎಂದು ಜಿಲ್ಲಾಡಳಿತ ಅಧಿಕೃತವಾಗಿ ತಿಳಿಸಿದೆ. ಮಧ್ಯಾಹ್ಮ ನಾಗತೀರ್ಥ ಎನ್ನುವ ಸ್ಥಳದಲ್ಲಿ ಸಂಪೂರ್ಣ ಕೊಳೆತು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಮೃತದೇಹ ದೊರಕಿದೆ.
ಗುಡ್ಡ ಕುಸಿತದಿಂದ ಇದುವರೆಗೆ ಕಣ್ಮರೆಯಾಗಿದ್ದ ಐವರಲ್ಲಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿವೆ. ಉಳಿದಂತೆ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಪತ್ನಿ ಶಾಂತಾ ಹಾಗೂ ಮಂಗಳೂರು ಮೂಲದ ಮತ್ತೋರ್ವ ಸಹಾಯಕ ಅರ್ಚಕ ಪತ್ತೆಯಾಗಬೇಕಿದೆ. ಈಗಾಗಲೇ ಎನ್.ಡಿ.ಆರ್.ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರು ಕಣ್ಮರೆಯಾದವರಿಗೆ ತೀವ್ರ ಶೋಧವನ್ನು ಮುಂದುವರೆಸಿದ್ದಾರೆ.