ವಿಜಯಪುರ: ನ್ಯಾಯಬೆಲೆ ಅಂಗಡಿಗೆ ಬಂದ ಅಕ್ಕಿ-ಬೆಳೆ ಕಾಳುಗಳನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಕ್ರಮ ದಂಧೆ ಇದೀಗ ಬಯಲಾಗಿದೆ.
ವಿಜಯಪುರ ಜಿಲ್ಲೆಯ ಅರಕೇರಿ ಗ್ರಾಮದ ಪಿಕೆಪಿಎಸ್ ಸೊಸೈಟಿಯ ನ್ಯಾಯಬೆಲೆ ಅಂಗಡಿಯ ಕ್ಲಾರ್ಕ್ ಹಣಮಂತಪ್ಪ ತಿವಾರಿ ಖುದ್ದು ಕಾಳು ಬೇಳೆಗಳನ್ನ ಅಕ್ರಮ ಸಾಗಾಟ ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯಪುರ ಮೂಲದ ಹೊಟೇಲ್ ಮಾಲಿಕನೊಬ್ಬನಿಗೆ ಕಾಳು ಬೇಳೆ, ಅಕ್ಕಿ ಮಾರಾಟ ಮಾಡಿ ಸಾಗಿಸುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಇಬ್ಬರನ್ನು ಹಿಡದಿದ್ದಾರೆ. ಬೆಳೆಕಾಳು – 70 ಕೆ.ಜಿ, ಅಕ್ಕಿ 50 ಕೆ.ಜಿ ಸೇರಿದಂತೆ ದವಸಧಾನ್ಯಗಳನ್ನ ಮಾರಿಕೊಳ್ಳುವಾಗ ಖದೀಮರು ಸಿಕ್ಕಿಬಿದ್ದಾರೆ.
ಲಾಕ್ಡೌನನಿಂದ ಒಪ್ಪತ್ತು ಊಟಕ್ಕೆ ಬಡ ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಡವರ ಹೊಟ್ಟೆ ಸೇರಬೇಕಿದ್ದ ಅಕ್ಕಿ-ಬೆಳೆ ಖದೀಮರ ಪಾಲಾಗುತ್ತಿದೆ.