Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಎಫ್‌ಬಿಯಿಂದ ಹೊರ ಬನ್ನಿ, ಆಯ್ಕೆ ನಿಮ್ಮದುʼ – ಸೇನಾಧಿಕಾರಿಗೆ ಹೈಕೋರ್ಟ್‌ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ‘ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಎಫ್‌ಬಿಯಿಂದ ಹೊರ ಬನ್ನಿ, ಆಯ್ಕೆ ನಿಮ್ಮದುʼ – ಸೇನಾಧಿಕಾರಿಗೆ ಹೈಕೋರ್ಟ್‌ ಸೂಚನೆ

Latest

‘ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಎಫ್‌ಬಿಯಿಂದ ಹೊರ ಬನ್ನಿ, ಆಯ್ಕೆ ನಿಮ್ಮದುʼ – ಸೇನಾಧಿಕಾರಿಗೆ ಹೈಕೋರ್ಟ್‌ ಸೂಚನೆ

Public TV
Last updated: July 15, 2020 2:10 pm
Public TV
Share
2 Min Read
facebook court indian army
SHARE

ನವದೆಹಲಿ: “ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಫೇಸ್‌ಬುಕ್‌ನಿಂದ ಹೊರಬನ್ನಿ, ಆಯ್ಕೆ ನಿಮ್ಮದು” ಹೀಗೆಂದು ದೆಹಲಿ ಹೈಕೋರ್ಟ್‌ ಸೇನೆಯ ಅಧಿಕಾರಿಗೆ ಖಡಕ್‌ ಆಗಿ ಸೂಚಿಸಿದೆ.

ಭಾರತೀಯ ಸೇನೆ ತನ್ನ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿದ್ದಕ್ಕೆ ತಡೆ ನೀಡಬೇಕೆಂದು ಕೋರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹೈ ಎಂಡ್ಲಾ ಮತ್ತು ಆಶಾ ಮೆನನ್ ಅವರಿದ್ದ ದ್ವಿಸದಸ್ಯ ಪೀಠ ಯಾವುದೇ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ವಿಶೇಷವಾಗಿ ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದ ಕಾರಣ ಅರ್ಜಿಗೆ ಯಾವುದೇ ಮಧ್ಯಂತರ ತಡೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಒಮ್ಮೆ ಖಾತೆಯನ್ನು ಡಿಲೀಟ್‌ ಮಾಡಿದ ಬಳಿಕ ಮತ್ತೆ ಅದರಲ್ಲಿರುವ ಡೇಟಾಗಳನ್ನು ಪಡೆಯಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು ಸಂರ್ಪಕಿಸಲು ಆಗುವುದಿಲ್ಲ.  ಇದರಿಂದಾಗುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಈ ರೀತಿಯ ಆದೇಶದಿಂದ ಪ್ರಕಟಿಸುವ ಮೂಲಕ ನನ್ನ ಕಕ್ಷಿದಾರರ ಖಾಸಗಿತನದ ಹಕ್ಕನ್ನು ಕಸಿಯಲಾಗಿದೆ. ಹೀಗಾಗಿ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಕೋರ್ಟ್‌ ನೀವು ದೇಶದ ಮುಖ್ಯ ಸಂಸ್ಥೆಯ ಭಾಗವಾಗಿದ್ದೀರಿ. ಮತ್ತು ಸಂಸ್ಥೆಯ ಆದೇಶಕ್ಕೆ ಬದ್ಧರಾಗಿರಬೇಕು. ನಿಮಗೆ ಫೇಸ್‌ಬುಕ್‌ ಮುಖ್ಯವಾಗಿದ್ದರೆ ನೀವು ಸೇನೆಗೆ ರಾಜೀನಾಮೆ ನೀಡಿ ಖಾತೆಯನ್ನು ಉಳಿಸಿಕೊಳ್ಳಬಹುದು. ಆಯ್ಕೆ ನಿಮ್ಮದು. ಯಾವ ಆಯ್ಕೆಯನ್ನು ಆರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿತು.

indian army social media

ಇಲ್ಲ. ಇಲ್ಲ. ಕ್ಷಮಿಸಿ. ನೀವು ದಯವಿಟ್ಟು ಖಾತೆಯನ್ನು ಡಿಲೀಟ್‌ ಮಾಡಿ. ಬೇಕಾದ್ರೆ ಮತ್ತೊಮ್ಮೆ ಹೊಸ ಖಾತೆಯನ್ನು ತೆರೆಯಬಹುದು. ಆದರೆ ಈ ರೀತಿ ಕೆಲಸ ಮಾಡಲು ಆಗುವುದಿಲ್ಲ. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆ ಸಂಸ್ಥೆಯ ಆದೇಶಕ್ಕೆ ಬದ್ಧವಾಗಿರಬೇಕು ಎಂದು ಸಲಹೆ ನೀಡಿತು.

ನನ್ನ ಕುಟುಂಬದ ಸದಸ್ಯರು ಸ್ನೇಹಿತರು ವಿದೇಶದಲ್ಲಿದ್ದಾರೆ. ಇವರ ಜೊತೆ ಮಾತನಾಡಲು ಫೇಸ್‌ಬುಕ್‌ ಬೇಕು. ಈ ಆದೇಶದಿಂದಾಗಿ ವಾಕ್‌ ಸ್ವಾತಂತ್ರ್ಯದ ಹಕ್ಕು, ವೈಯಕ್ತಿಕ ಜೀವನದ ಹಕ್ಕು, ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ಸೇನಾಧಿಕಾರಿ ಮನವಿ ಮಾಡಿದರು.

ಈ ವಿಚಾರಣೆಗೆ ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌(ಎಎಸ್‌ಜಿ) ಚೇತನ್‌ ಶರ್ಮಾ ಹಾಜರಾಗಿ ಫೇಸ್‌ಬುಕ್‌ ಮೂಲಕ ನಮ್ಮ ಸಿಬ್ಬಂದಿಯನ್ನು ಗುರಿಯಾಗಿಸಿ ಸೈಬರ್‌ ದಾಳಿಯಾಗುವ ಸಾಧ್ಯತೆಯಿದೆ. ಅವರಿಗೆ ಸಂವಹನ ಮಾಡ ಬೇಕಿದ್ದರೆ ವಾಟ್ಸಪ್‌, ಸ್ಕೈಪ್‌, ಟ್ವಿಟ್ಟರ್‌ ಇದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಎರಡು ಕಡೆಯ ವಾದ ಆಲಿಸಿದ ಬಳಿಕ, ಯಾವ ಆಧಾರದ ಮೇರೆಗೆ ಭಾರತೀಯ ಸೇನೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರಿದೆ? ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕೇಂದು ಎಎಸ್‌ಜಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.

ತಮ್ಮ ಮೊಬೈಲ್‌ ಫೋನ್‌ನಲ್ಲಿರುವ 89 ಆ್ಯಪ್‌ ಮತ್ತು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳನ್ನು ಜುಲೈ 15ರ ಒಳಗಡೆ ಡಿಲೀಟ್‌ ಮಾಡುವಂತೆ ತನ್ನ 13 ಲಕ್ಷ ಸೈನಿಕರು ಮತ್ತು ಅಧಿಕಾರಿಗಳಿಗೆ ಭೂಸೇನೆ ಜುಲೈ 8ರಂದು ಸೂಚನೆ ನೀಡಿತ್ತು

ಭದ್ರತೆ ಹಾಗೂ ಗೌಪ್ಯ ಮಾಹಿತಿಗಳ ಸೋರಿಕೆಯ ಅಪಾಯದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿರುವ ಸೇನೆ ಆದೇಶವನ್ನು ಪಾಲನೆ ಮಾಡದೇ ಇದ್ದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಈ 89 ಆ್ಯಪ್‌ಗಳಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿದ ಚೀನಾಕ್ಕೆ ಸೇರಿದ 59 ಆ್ಯಪ್‌ಗಳೂ ಸೇರಿವೆ.

TAGGED:delhifacebookhigh courtindian armysocial mediaದೆಹಲಿಫೇಸ್‍ಬುಕ್ಭದ್ರತೆಭಾರತೀಯ ಸೇನೆಸಾಮಾಜಿಕ ಜಾಲತಾಣಹೈಕೋರ್ಟ್
Share This Article
Facebook Whatsapp Whatsapp Telegram

Cinema news

Dhruva sarja
ರಂಗನತಿಟ್ಟು ಪಕ್ಷಿಧಾಮ ಕಾರ್ಮಿಕರಿಗೆ ಧ್ರುವ ಸಹಾಯಹಸ್ತ – ರಿಯಲ್‌ ಹೀರೋ ಅಂದ್ರು ಫ್ಯಾನ್ಸ್‌
Cinema Latest Sandalwood Top Stories
Jaggesh 3
`ರಾಯರೆ ನನ್ನ ಉಸಿರು’ ಅಂತ ಭಾವುಕರಾದ ನಟ ಜಗ್ಗೇಶ್
Cinema Latest Sandalwood
Green Cinema
ಒಟಿಟಿಗೆ ಬಂತು ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’ ಸಿನಿಮಾ
Cinema Latest Sandalwood Top Stories
Raichuru Beer Abhisheka
ತೆಲುಗು ನಟ ಬಾಲಕೃಷ್ಣ ಸಿನಿಮಾ ಪೋಸ್ಟರ್‌ಗೆ ಬಿಯರ್ ಅಭಿಷೇಕ: ಅಭಿಮಾನಿಯ ವಿಚಿತ್ರ ಪ್ರೇಮ
Cinema Districts Karnataka Latest Raichur Top Stories

You Might Also Like

Chandra Lyout Constable Instagram Love copy
Bengaluru City

2ನೇ ಗಂಡನನ್ನು ಬಿಟ್ಟು ಕಾನ್ಸ್‌ಟೇಬಲ್ ಜೊತೆ ಮಹಿಳೆ ಎಸ್ಕೇಪ್ – ಪೇದೆ ಅಮಾನತು

Public TV
By Public TV
27 minutes ago
dk shivakumar 1 6
Bengaluru City

ಮತಗಳ್ಳತನ ನಡೆದಿರುವುದು ಸತ್ಯ, ಇದರ ವಿರುದ್ಧ ಸೂಕ್ತ ಕ್ರಮ: ಡಿಕೆಶಿ

Public TV
By Public TV
43 minutes ago
Anjali Nimbalkar
Latest

ವಿಮಾನದಲ್ಲೇ ಚಿಕಿತ್ಸೆ ನೀಡಿ ಅಮೆರಿಕ ಯುವತಿಯ ಜೀವ ಉಳಿಸಿದ ಅಂಜಲಿ ನಿಂಬಾಳ್ಕರ್

Public TV
By Public TV
55 minutes ago
Madikeri Police
Crime

ಮಡಿಕೇರಿಯಲ್ಲಿ ಮಂಡ್ಯದ ಯುವಕನಿಗೆ ಹನಿಟ್ರ್ಯಾಪ್‌ ಆರೋಪ – ಹೋಂ ಸ್ಟೇಗೆ ಕರೆಸಿಕೊಂಡು ಹಣಕ್ಕೆ ಡಿಮ್ಯಾಂಡ್‌

Public TV
By Public TV
2 hours ago
MB Patil 2
Bengaluru City

2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ – ಎಂ.ಬಿ ಪಾಟೀಲ್

Public TV
By Public TV
2 hours ago
CONGRESS
Latest

ವೋಟ್ ಚೋರ್, ಗಡ್ಡಿ ಛೋಡ್ – ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?