ರಾಮನಗರ: ಇಲ್ಲಿನ ಬಿಡದಿ ಸಮೀಪದ ಈಗಲ್ ಟನ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ಹೊರಡುವ ಇಲ್ಲವೇ ಈಗಲ್ ಟನ್ ನಿಂದ ಬೇರೆಡೆ ಶಿಫ್ಟ್ ಆಗುವ ಲಕ್ಷಣಗಳು ದಟ್ಟವಾಗಿವೆ.
ಬೆಳ್ಳಂಬೆಳಗ್ಗೆಯೇ ರೆಸಾರ್ಟ್ ಒಳಗೆ ಎರಡು ಐರಾವತ ಬಸ್ಗಳು ಪ್ರವೇಶಿಸಿವೆ. ಇದ್ರಿಂದ ಗುಜರಾತ್ ಶಾಸಕರು ರೆಸಾರ್ಟ್ ನಿಂದ ಹೊರ ಹೋಗಲಿದ್ದಾರೆ ಎನ್ನಲಾಗ್ತಿದೆ. ಶಾಸಕರೆಲ್ಲರೂ ಕೂಡಾ ಪ್ರವಾಸಕ್ಕೆ ಬೆಂಗಳೂರು ಅಥವಾ ಮಡಿಕೇರಿ ಕಡೆಗೆ ಹೋಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದ್ರೆ ಬಸ್ ಗಳು ರೆಸಾರ್ಟ್ ಒಳಪ್ರವೇಶ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಈಗಲ್ ಟನ್ ರೆಸಾರ್ಟ್ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸಿನಿಮಾ ಚಿತ್ರಿಕರಣಕ್ಕೆ ಬಸ್ ಗಳು ಬಂದಿವೆ ಅಂತ ತಿಳಿಸುತ್ತಿದ್ದಾರೆ.
ಐಟಿ ಡ್ರಿಲ್ಲಿಂಗ್: ಅಧಿಕಾರಿಗಳ ಆ ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದು ಹೀಗೆ https://t.co/CoGy9AJj4O#incometax #dkshivakumar #itraid #bengaluru pic.twitter.com/q4MiF774Z0
— PublicTV (@publictvnews) August 4, 2017