ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ 7 ವರ್ಷ ಪೂರೈಸಿದ ಪರಮೇಶ್ವರ್ಗೆ ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿದ್ದಾರೆ.
ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪರಮೇಶ್ವರ್, ನಾನು ಕೆಪಿಸಿಸಿ ಅಧ್ಯಕ್ಷನಾಗಿ 7 ವರ್ಷ ಪೂರೈಸಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಧನ್ಯವಾದಗಳು. ಹಾಗೂ ದೆಹಲಿಯಿಂದ ಬಂದ ಎಲ್ಲ ಪ್ರಧಾನ ಕಾರ್ಯದರ್ಶಿಗಳು ನನಗೆ ಸಾಥ್ ನೀಡಿದ್ದಾರೆ. ನನ್ನ ನಂಬಿ ಜವಾಬ್ದಾರಿ ಕೊಟ್ಟ ಹೈಕಮಾಂಡ್ಗೆ ನಾನು ಋಣಿಯಾಗಿರುತ್ತೇನೆಂದು ಧನ್ಯವಾದ ತಿಳಿಸಿದರು.
ಕಷ್ಟದಲ್ಲಿದ್ದ ಪಕ್ಷವನ್ನ 2013 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದಿದ್ದೇವೆ. 2018 ಕ್ಕೂ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ನನ್ನ 8 ನೇ ವರ್ಷದ ಸಂಕಲ್ಪ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
2018ರ ಚುನಾವಣೆಯಲ್ಲಿ ಬಿಜೆಪಿ ರೀತಿ ನಮಗೆ ಮಿಷನ್ ಬೇಕಿಲ್ಲ. ಅಧಿಕಾರಕ್ಕೆ ಬರುವುದೇ ನಮಗೆ ಮುಖ್ಯ ಗುರಿ ಎಂದರು. 2018 ಕ್ಕೆ ಚುನಾವಣೆ ಸ್ಪರ್ಧೆ ನಿಶ್ಚಿತ ಆದರೆ ನಾನು ಎಲ್ಲಿ ನಿಲ್ಲಬೇಕು ಅನ್ನೋದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ಪರಮೇಶ್ವರ್ ಹೇಳಿದರು.