ಬೆಳಗಾವಿ: ನೀರಾವರಿ ಅಧಿಕಾರಿಯೊಬ್ಬರು ದರ್ಪ ತೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
- Advertisement 2
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಟೋಜಿ ರಾವ್ ಅವರು ತಮ್ಮ ಚಾಲಕನ ಕೈಯಲ್ಲಿ ಶೂ ತೆಗೆದುಕೊಂಡು ಹೋಗುವಂತೆ ಹೇಳೋ ಮೂಲಕ ದರ್ಪ ತೋರಿಸಿದ್ದಾರೆ.
- Advertisement 3
- Advertisement 4
ಮಲಪ್ರಭೆ ನೀರು ಕಳಸಾಗೆ ಸೇರಿ ಗೋವಾ ಪಾಲಾಗುತ್ತಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿ ಈ ದರ್ಪ ತೋರಿದ್ದಾರೆ. ಅಧಿಕಾರಿ ಭೇಟಿ ನೀಡುವ ಸ್ಥಳ ಕೆಸರಿನಿಂದ ತುಂಬಿತ್ತು. ಹೀಗಾಗಿ ಶೂ ಕಳಚಿದ ಅಧಿಕಾರಿ ಶೂ ಕಳಚಿ ತಮ್ಮ ಚಾಲಕ ಗಣಪತಿ ಮದ್ಲಿಗೆ ನೀಡಿದ್ದಾರೆ. ಆ ಬಳಿಕ ಚಾಲಕ ಅಧಿಕಾರಿಯ ಶೂ ಹಿಡಿದುಕೊಂಡು ಹೋಗಿದ್ದು, ಈ ಮೂಲಕ ಅಧಿಕಾರಿಯ ಶೂ ಸೇಫ್ ಆಗಿದೆ.