ವಿಜಯಪುರ: ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಗೆ ಬೋರ್ವೆಲ್ ಕೊರೆಯುವ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಇಂಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಇಂಡಿ ಪಟ್ಟಣ ನಿವಾಸಿ 57 ವರ್ಷದ ಬೋಪಾಲ ಹಡಪದ ಮೃತ ದುರ್ದೈವಿ.
- Advertisement 2
- Advertisement 3
ಬೋಪಾಲ ಹಡಪದ ಎಂದಿನಂತೆ ಇಂದು ಕೂಡ ತನ್ನ ಪತ್ನಿ ಜೊತೆ ವಾಯು ವಿಹಾರಕ್ಕೆಂದು ಬಂದಿದ್ದರು. ಈ ವೇಳೆ ಬೊರ್ವೆಲ್ ಕೊರೆಯುವ ವಾಹನವೊಂದು ಬೋಪಾಲರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಪಾಲ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಪತಿ ಕಣ್ಣ ಮುಂದೆಯೇ ಸಾವನ್ನಪ್ಪಿದ್ದನ್ನು ಕಂಡು ಪತ್ನಿಗೆ ದಂಗು ಬಡಿದಂತಾಗಿದ್ದು, ಪತಿ ಶವದ ಮುಂದೆ ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.
- Advertisement 4
ಘಟನೆಯ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಇಂಡಿ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.