ಬಳ್ಳಾರಿ: ಗಂಡಸುತನದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಗಂಡ ಮೂರು ಮದುವೆ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ನವೋದಯ ಆಸ್ಪತ್ರೆಯಲ್ಲಿ ಹೊಡೆದಾಟ ನಡೀತಿತ್ತು. ಮೊದಲು ಯಾರೋ ರೋಗಿ ಕಡೆಯವರು ಅಂತ ಜನ ಅಂದುಕೊಂಡ್ರು. ಆಮೇಲೆ ನೋಡಿದ್ರೆ ಇದೇ ಆಸ್ಪತ್ರೆಯ ವೈದ್ಯ ರಾಮು ಅಲಿಯಾಸ್ ರಾಮಾಂಜನೇಯಗೆ ಆತನ ಪತ್ನಿಯೇ ಹಿಗ್ಗಾಮುಗ್ಗಾ ಥಳಿಸ್ತಿದ್ರು.
11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಶಿರೇಖಾ-ರಾಮು ದಂಪತಿ ಮಧ್ಯೆ ಜಗಳ ಆಗಿತ್ತು. ಶಶಿರೇಖಾ ಗಂಡನಿಗೆ ನಿನಗೆ ಅದೇ ಇಲ್ಲ ಅಂತ ಹೀಯಾಳಿಸಿದ್ರಂತೆ. ಅದಕ್ಕೆ ಡಾಕ್ಟರ್ ಮಹಾಶಯ ಮತ್ತೆ ಇಬ್ಬರನ್ನ ಮದುವೆಯಾಗಿ ಇಬ್ಬರಿಗೂ ಮಕ್ಕಳನ್ನ ಕರುಣಿಸಿದ್ದಾನೆ.
ಮೊದಲ ಪತ್ನಿ ಶಶಿರೇಖಾಗೂ ಮಗು ಆಗಿದೆ. ಆದ್ರೆ ಅದಕ್ಕೆ ಅಪ್ಪ ನಾನಲ್ಲ, ಅವಳಿಗೆ ಡೈವೋರ್ಸ್ ಕೊಟ್ಟಿದ್ದೀನಿ. ತಿಂಗಳಿಗೆ 60 ಸಾವಿರನೂ ಕೊಡ್ತಿದ್ದೀನಿ. ಆದ್ರೆ ನನ್ನ ಮಕ್ಕಳನ್ನ ಕೊಲ್ತೀನಿ. ನನ್ನ ತಾಯಿನಾ ಕೊಲ್ತೀನಿ ಅಂದ್ಲು. ಅದಕ್ಕೆ ಅವಳನ್ನ ಬಿಟ್ಟೆ. ನನಗೆ ಗಂಡಸುತನ ಇಲ್ಲ. ಮಕ್ಕಳು ಕೊಡೋ ಅರ್ಹತೆ ಇಲ್ಲ ಎಂದ್ರು ಅನ್ನೋದು ಡಾಕ್ಟರ್ ವಾದ. ಆದ್ರೆ ಇದೆಲ್ಲಾ ಕಟ್ಟುಕಥೆ ಅನ್ನೋದು ಶಶಿರೇಖಾ ಅವರ ಅಳಲು.