ಬಳ್ಳಾರಿ: ಮನೆಯಲ್ಲಿ ನಿಧಿ ತೆಗೆಯುವ ಆಸೆ ತೋರಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಜಮಖಂಡಿಯ ನಿವಾಸಿ ಕೃಷ್ಣಜೀ (45), ತೆಲಂಗಾಣದ ಆಧಿಲಾಬಾದ್ ಶೇಖ್ ರಹೀಂ(35), ರಾಯಚೂರನ ಹಾಜಿ ಬಾಬಾ(33) ಹಾಗೂ ಹೊಸಪೇಟೆ ನಗರದ ವೆಂಕಟೇಶ(43)ಬಂಧಿತ ಆರೋಪಿಗಳು. ಬಂಧಿತರಿಂದ 23 ಲಕ್ಷ ರೂಪಾಯಿ ಮೌಲ್ಯದ 800 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement 2
ಮಾರ್ಚ್ 3 ರಂದು ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಎಲ್.ನಾಯಕ್ ಎಂಬವರ ಮನೆಯಲ್ಲಿ ನಿಧಿ ಎಂದು ನಂಬಿಸಿ, ಮನೆಯಲ್ಲಿದ್ದ ಚಿನ್ನದ ಒಡೆವೆಗಳನ್ನು ಪೂಜೆಗೆ ಇರಿಸಿ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೆÇಲೀಸರು, ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದರು.
- Advertisement 3
ಪೊಲೀಸ್ ಇನ್ಸ್ ಪೆಕ್ಟರ್ ಲಿಂಗನಗೌಡ ನೆಗಳೂರು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಎಸ್ಪಿ ಆರ್.ಚೇತನ್ ಹಾಗೂ ಹೆಚ್ಚುವರಿ ಎಸ್ಪಿ ಝಂಡೇಕರರ್ ಅವರು ತಂಡದ ಕಾರ್ಯಾಚರಣೆಗೆ ಮೆಚ್ಚುಗೆ ಸೂಚಿಸಿದ್ದಾರೆ.
- Advertisement 4