ಮೈಸೂರು: ಮತಾಂತರಕ್ಕೆ ಒಪ್ಪದ ಮಗನಿಗೆ ತಂದೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಲ್ಲಿ ನಡೆದಿದೆ.
ಪವಿತ್ ಎಂಬಾತನೇ ತಂದೆ ರವಿಯಿಂದ ಹಲ್ಲೆಗೊಳಗಾದ ಮಗ. ಬುಡುಕಟ್ಟು ಜನಾಂಗದ ರವಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆದರೆ ಪುತ್ರ ಪವಿತ್ ಮತಾಂತರಗೊಳ್ಳದೇ ಹಿಂದೂ ಧರ್ಮದಲ್ಲಿ ಮುಂದುವರೆದಿದ್ದನು.
ರವಿ ಮಾತ್ರ ಮತಾಂತರಗೊಳ್ಳುವಂತೆ ಮಗನ ಮೇಲೆ ಒತ್ತಡ ಹಾಕುತ್ತಿದ್ದರು. ದೇವಸ್ಥಾನಕ್ಕೆ ಬಂದಿದ್ದ ಮಗ ಪವಿತ್ನನ್ನು ಕಂಡ ರವಿ ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದು, ರವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=S0JyvLDfqcA