ನವದೆಹಲಿ: ರಸ್ತೆಯಲ್ಲಿಯೇ ಶಾಲಾ ಬಸ್ ಒಂದು ಹೊತ್ತಿ ಉರಿದಿದ್ದು, ಸುಮಾರು 30 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿರುವ ಘಟನೆ ದೆಹಲಿಯ ಡೌಲಾ ಕುವಾನ್ ಪ್ರದೇಶದಲ್ಲಿ ನಡೆದಿದೆ.
ನಾರಾಯಣದಲ್ಲಿರುವ ಕೇಂದ್ರಿಯ ವಿದ್ಯಾಲಯ ಶಾಲೆಗೆ ಸೇರಿದ ಬಸ್ ಆಗಿದೆ. ಈ ಬಸ್ ಸುಮಾರು 30 ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಡೌಲಾ ಕುವಾನ್ ಸಮೀಪದಲ್ಲಿ ಇದ್ದಕ್ಕಿದ್ದಂತೆ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
- Advertisement 2
- Advertisement 3
ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ವಿದ್ಯಾರ್ಥಿಗಳು ಕಿರಿದಾದ ಮಾರ್ಗದಿಂದ ತಪ್ಪಿಸಿಕೊಂಡಿದ್ದಾರೆ. ತಾಂತ್ರಿಕ ದೋಷದಿಂದ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
- Advertisement 4
ಘಟನೆ ನಡೆದ ಸ್ಥಳಕ್ಕೆ ತಕ್ಷಣ ಮಾಹಿತಿ ತಿಳಿದು ಮೂರು ಅಗ್ನಿಶಾಮಕ ದಳಗಳು ಬಂದು ಬೆಂಕಿಯನ್ನು ನಂದಿಸಿವೆ. ಸದ್ಯ ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಯಾರೊಬ್ಬರಿಗೆ ಅಪಾಯ ಸಂಭವಿಸಿಲ್ಲ ಮಾಧ್ಯಮಗಳು ವರದಿ ಮಾಡಿವೆ.
ಬಸ್ನ ಇಂಜಿನ್ನಲ್ಲಿ ತಾಂತ್ರಿಕ ದೋಷ ಉಂಟಾಗಿ ಈ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಇನ್ನು ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
#Visuals from Delhi: Fire breaks out in a school bus near Dhaula Kuan area, three fire tenders present at the spot. Students evacuated pic.twitter.com/GMKnhTPJWt
— ANI (@ANI) October 31, 2017
#Visuals from Delhi: Fire broke out in a school bus near Dhaula Kuan area, students were evacuated. Fire extinguished pic.twitter.com/VUl7ZPL4Nk
— ANI (@ANI) October 31, 2017