ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಸಾಗಿದ ರೀತಿಯಲ್ಲೇ ಬೆಳೆಯಲು ಆರಂಭಿಸಿದ್ದು, ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.
ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾನೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ವಿನೀಶ್ ದರ್ಶನ್ ವ್ಯಾಸಂಗ ಮಾಡುತ್ತಿದ್ದು, ಓದುವುದರಲ್ಲೂ ಮುಂಚೂಣಿಯಲ್ಲಿದ್ದಾನೆ.
ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವನ್ನು ಹಾಕಿ ಅಭಿನಂದಿಸಿದ್ದಾರೆ. ತಂದೆಯಂತೆ ಮಗ ವಿನೀಶ್ ಇದೇ ರೀತಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸುತ್ತಿದ್ದಾರೆ.
ದರ್ಶನ್ ಪುತ್ರನನ್ನು ಸಿನಿ ರಂಗಕ್ಕೆ ಈಗಾಗಲೇ ಪರಿಚಯಿಸಿದ್ದಾರೆ. ಐರಾವತ ಚಿತ್ರದಲ್ಲಿ ಮಗ ವಿನೀಶ್ ಬಣ್ಣ ಹಚ್ಚಿದ್ದ. ಈ ಮೂಲಕ ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿಯಾಗಿ ವಿನೀಶ್ ಸಿನಿ ಲೋಕಕ್ಕೆ ಕಾಲಿಟ್ಟಿದ್ದ.