ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಆಸ್ಪತ್ರೆ ಕಿಮ್ಸ್ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತದೆ. ಇಂದು ಆಸ್ಪತ್ರೆಗೆ ಬಂದ ಕ್ಯಾನ್ಸರ್ ಪೀಡಿತ ರೋಗಿಯನ್ನು ಅಡ್ಮಿಟ್ ಮಾಡಿಕೊಳ್ಳದೆ ಹೊರಹಾಕಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕ್ಯಾಡ ಗ್ರಾಮದ ಯಮನವ್ವಾ ಎನ್ನುವ ವಯೋವೃದ್ಧಿ ಕ್ಯಾನ್ಸರ್ ರೋಗದಿಂದ ಬಳುಲುತ್ತಿದ್ದು, ಅವರನ್ನು ಇಂದು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದ್ರೆ ಕ್ಯಾನ್ಸರ್ಗೆ ಚಿಕಿತ್ಸೆ ನೀಡೋ ವೈದ್ಯರು ಇಲ್ಲಾ ನಾಳೆ ಮುಂಜಾನೆ ಬನ್ನಿ ಎಂದು ಅಡ್ಮಿಟ್ ಮಾಡಿಕೊಳ್ಳದೆ ಹೊರಹಾಕಿದ್ದಾರೆ.
ರೋಗಿಯನ್ನು ಸ್ಟ್ರ್ರಚೆರ್ನಲ್ಲಿ ನೀವೇ ತಳ್ಳಿಕೊಂಡು ಹೋಗಿ ದರ್ಪ ಮೆರೆದಿದ್ದಾರೆ. ಹೀಗಾಗಿ ಅಜ್ಜಿಯ ಮಗ ಹಾಗೂ ಗಂಡ ಸ್ಟ್ರಚರ್ ತಾವೇ ತಳ್ಳಕೊಂಡು ಧರ್ಮಶಾಲೆಯವರಿಗೆ ಬಂದಿದ್ದಾರೆ. ಮಾಧ್ಯಮದವರು ಹೋದಾಗ ಕಿಮ್ಸ್ ಅಧಿಕ್ಷಕರಾದ ಡಾ. ಶಿವಪ್ಪ ಎಂಬವರು ಅಜ್ಜಿಯನ್ನು ಕಿಮ್ಸ್ ಆಂಬ್ಯಲೆನ್ಸ್ ಮೂಲಕ ಕಿಮ್ಸ್ ಕಳುಹಿಸಿದ್ದಾರೆ. ಕಿಮ್ಸ್ ಅಧಿಕ್ಷಕರು ತಪ್ಪಿತಸ್ಥರ ಕ್ರಮ ಕೈಗೊಳ್ಳುವ ಭರವಸೆಯನ್ನು ಡಾ.ಶಿವಪ್ಪ ನೀಡಿದ್ದಾರೆ.