ಚಿತ್ರದುರ್ಗ: ಮಕ್ಕಳ ಆರೈಕೆಯಲ್ಲಿ ಕೊಂಚ ಯಾಮಾರಿದ್ರೂ ಪ್ರಾಣವೇ ಕಳೆಕೊಳ್ಳಬೇಕಾಗುತ್ತೆ. ಇಂತಹುದೇ ಘಟನೆ ಚಿತ್ರದುರ್ಗದ ಕಕ್ಕೆರೆ ಗ್ರಾಮದಲ್ಲಿ ನಡೆದಿದೆ.
ಆಕಸ್ಮಿಕವಾಗಿ ಕಡಲೆಕಾಳು ನುಂಗಿದ ಬಾಲಕನಿಗೆ ಉಸಿರಾಡಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. 1 ವರ್ಷ 5 ತಿಂಗಳ ಸೃಜನ್ ಮೃತ ಬಾಲಕ. ಈತ ಗ್ರಾಮದ ಅಂಬಿಕಾ ಮತ್ತು ಪಾಥಲಿಂಗಪ್ಪ ದಂಪತಿಯ ಮಗ.
- Advertisement 2
ಕಡಲೆಕಾಳು ತಿಂದು ಉಸಿರುಗಟ್ಟಿ ಒದ್ಡಾಡುತಿದ್ದ ಮಗುವನ್ನ ಗ್ರಾಮದಿಂದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
- Advertisement 3
ಕಕ್ಕೆರೆ ಗ್ರಾಮದಿಂದ ಚಿತ್ರದುರ್ಗ ನಗರಕ್ಕೆ ಸುಮಾರು 30 ಕಿ.ಮೀ ಅಂತರವಿದೆ. ಸ್ಥಳೀಯವಾಗಿ ಯಾವುದೇ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಇಲ್ಲದೇ ಇರುವುದೇ ಮಗುವಿನ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.