ಮೈಸೂರು: ದಮ್ಮಯ್ಯ ಬಿಟ್ಟುಬಿಡಿ ಅಂದ್ರೂ ಬಿಡದೇ ಯುವಕನಿಗೆ ಜೆಡಿಎಸ್ ಶಾಸಕರ ಪುತ್ರ ಥಳಿಸಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.
ಯುವಕನಿಗೆ ಥಳಿಸಿದ ಘಟನೆ ಸುಮಾರು ಒಂದೂವರೆ ವರ್ಷದ ಹಿಂದೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಕೂಡ ಹರಿದಾಡುತ್ತಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.
ಈ ವಿಡಿಯೋದಲ್ಲಿ ಥಳಿತಕ್ಕೊಳಗಾದ ಚೇತನ್ ಕೆಆರ್ ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪುತ್ರ ಜಯಂತ್ ಮುಂದೆ ಚಿನ್ನದ ಸರ ಕದ್ದಿದ್ದನ್ನ ಒಪ್ಪಿಕೊಂಡಿದ್ದಾನೆ. ಹೀಗಾಗಿ ಸರಗಳ್ಳನದ ಬಗ್ಗೆ ವಿಚಾರಣೆ ಮಾಡುವ ನೆಪದಲ್ಲಿ ನಡೆದಿರುವ ಹಲ್ಲೆ ಇದಾಗಿದೆ ಎಂದು ಹೇಳಲಾಗಿದೆ.
ಮೈಸೂರಿನ ಫುಟ್ವೇರ್ ಅಂಗಡಿಯೊಂದರಲ್ಲಿ ಚೇತನ್ ಸರಗಳ್ಳತನ ಮಾಡಿದ್ದ. ಹೀಗಾಗಿ ಸಿಸಿಟಿವಿ ದೃಶ್ಯ ಆಧರಿಸಿ ಶಾಸಕರ ಪುತ್ರ ಜಯಂತ್ ಕಳವುಗೈದ ಚೇತನ್ನನ್ನು ಕರೆತಂದು ಪ್ರಶ್ನೆ ಮಾಡಿದ್ದ ಎನ್ನಲಾಗಿದೆ.
ವಿಚಾರಣೆಯ ವೇಳೆ ಆರೋಪಿ ಚೇತನ್ ಗೆ ಶಾಸಕರ ಪುತ್ರ ಸೇರಿ ನಾಲ್ಕೈದು ಮಂದಿ ಮುಂದೆ ಇಂತಹ ತಪ್ಪು ಮಾಡದಂತೆ ಥಳಿಸಿದ್ದಾರೆ. ಈ ವೇಳೆ ಆರೋಪಿ ದಮ್ಮಯ್ಯ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಮೈಸೂರಲ್ಲಿ ಜೆಡಿಎಸ್ ಎಂಎಲ್ಎ ಪುತ್ರನ ದರ್ಪ- ಯುವಕನಿಗೆ ಸಾರಾ ಮಹೇಶ್ ಪುತ್ರನಿಂದ ಥಳಿತ https://t.co/DHriMTL8si#Mysuru #JDS #MLA #Son pic.twitter.com/TdogVW9nm7
— PublicTV (@publictvnews) November 22, 2017