ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಆರು ಜನ ಪ್ರವಾಸಿಗರು ನೀರಿನಲ್ಲಿ ಕೊಚ್ಚಿಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಂಡಿಯಾ ಬಳಿಯ ನಾಗರಮಡಿ ಫಾಲ್ಸ್ ನಲ್ಲಿ ನಡೆದಿದೆ.
ಗೋವಾದ ಮಡಗಾವ್ ದಿಂದ ಕಾರವಾರದ ನಾಗರಮಡಿ ಫಾಲ್ಸ್ಗೆ ಆಗಮಿಸಿದ್ದ 25 ಕ್ಕೂ ಹೆಚ್ಚು ಜನ ಪ್ರವಾಸಿ ತಂಡ ಮದ್ಯ ಸೇವಿಸಿ ನೀರಿನಲ್ಲಿ ಇಳಿದಿದ್ದರು. ಈ ಸಮಯದಲ್ಲಿ ಹೆಚ್ಚಿನ ಮಳೆಯಿಂದಾಗಿ ನೀರಿನ ರಭಸ ಹೆಚ್ಚಾಗಿ ಆರು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಪ್ರಂಸಿಲ್ಲಾ(21) ಫಿಯಾನ(28) ರೇಣುಕಾ(23) ಮಾರ್ಸಲೀನ ಮೆಕ್ಸಿಕಾ(38) ಸಮೀರ್ ಗಾವಡೇ(28) ಹಾಗೂ ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದ್ದು ನೀರಿನಲ್ಲಿ ಕೊಚ್ಚಿಹೋದವರಾಗಿದ್ದಾರೆ. ಪ್ರಂಸಿಲ್ಲಾ ಮತ್ತು ಪಿಯಾನ ಎಂಬವರ ಶವವನ್ನ ನೀರಿನಿಂದ ಹೊರತೆಗೆಯಲಾಗಿದ್ದು ಉಳಿದವರ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.