ಲಕ್ನೋ: ಮೊದಲ ರಾತ್ರಿಯಲ್ಲಿ ಪತ್ನಿಯನ್ನ ನೋಡಿದ ನಂತರ ಕಂಗಾಲಾಗಿ ನವವಿವಾಹಿತನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಮೇ 9 ರಂದು ಮೇನ್ಪುರಿಯಲ್ಲಿ ಕಿಷ್ಣಿಯ ಹರೇಂದ್ರ ಜಾತವ್, ಹಾರ್ಡೊಯಿ ಜಿಲ್ಲೆಯ 19 ವರ್ಷದ ಯುವತಿಯನ್ನು ಮದುವೆಯಾಗಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯಂದು ಆಕೆ ಹುಡುಗಿ ಅಲ್ಲ ಮಂಗಳಮುಖಿ ಎಂದು ತಿಳಿದಿದೆ. ಇದರಿಂದ ವರ ಕಂಗಾಲಾಗಿ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ್ದಾನೆ.
- Advertisement 2
ಇವರಿಬ್ಬರ ಮದುವೆ ಅದ್ಧೂರಿಯಾಗಿ ಸುಮಾರು 12 ದಿನಗಳ ಕಾಲ ನಡೆದಿದೆ. ಆ ದಿನಗಳಲ್ಲಿ ಒಂದು ದಿನವೂ ವಧು ಮಂಗಳಮುಖಿ ಎಂದು ತಿಳಿದು ಬಂದಿಲ್ಲ. ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿದಿದೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ವೈದ್ಯರ ವರದಿಯಲ್ಲಿ ಯುವಕನ ಅನುಮಾನ ದೃಢಪಟ್ಟಿದೆ. ಬಳಿಕ ಗ್ರಾಮದ ಹಿರಿಯರು ಆಕೆಯನ್ನು ಪೋಷಕರ ಮನೆಗೆ ಕಳುಹಿಸಿದ್ದಾರೆ.
- Advertisement 3
ನಾನು ಮದುವೆಯಾಗುವುದಕ್ಕೆ ಮುಂಚಿತವಾಗಿ ಆಕೆಯನ್ನ ತುಂಬಾ ಪ್ರೀತಿಸುತ್ತಿದ್ದೆ. ನನಗೆ ನನ್ನ ಮೊದಲ ರಾತ್ರಿಯಂದು ಆಕೆ ಮಂಗಳಮುಖಿ ಎಂದು ತಿಳಿಯಿತು. ತಕ್ಷಣ ಕೆಲ ಸೆಕೆಂಡ್ ಗಾಬರಿಯಿಂದ ಕುಸಿದು ಬಿದ್ದೆ. ಮರುದಿನ ಬೆಳಗ್ಗೆ ಈ ವಿಷಯವನ್ನು ಪೋಷಕರಿಗೆ ತಿಳಿಸಿದೆ ಎಂದು ಜಾತವ್ ಹೇಳಿದ್ದಾರೆ.
- Advertisement 4
ಈ ಘಟನೆ ಸಂಬಂಧ ಕಿಷ್ಣಿಯ ಪೊಲೀಸ್ ಠಾಣೆಗೆ ಹೋಗಿ, ಮದುವೆ ವೇಳೆ ನನಗೆ ಮೋಸವಾಗಿದೆ. ನ್ಯಾಯ ಕೊಡಿಸಿ ಎಂದು ನವವಿವಾಹಿತ ಮನವಿ ಮಾಡಿಕೊಂಡಿದ್ದಾನೆ. ಆದರೆ ಎರಡು ಕುಟುಂಬದವರು ಒಪ್ಪಿಗೆ ಮೇರೆಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಎಂದು ಕಾನ್ಸ್ ಟೇಬಲ್ ತಿಳಿಸಿದ್ದಾರೆ.