Tag: ನಟ ಕಮಲ್ ಹಾಸನ್

  • ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ಹಿಂದೂ ಭಯೋತ್ಪಾದನೆ ಕುರಿತ ನಟ ಕಮಲ ಹಾಸನ್ ಹೇಳಿಕೆಗೆ ಪ್ರಕಾಶ್ ರೈ ಬೆಂಬಲ

    ನವದೆಹಲಿ: ದೇಶದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ನಟ ಕಮಲ್ ಹಾಸನ್ ಅವರು ಹೇಳಿಕೆ ನೀಡಿದ ಮರುದಿನವೇ ನಟ ಪ್ರಕಾಶ್ ರೈ ಕಮಲ್ ಹಾಸನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುವ ರೀತಿಯಲ್ಲಿ ಭಯೋತ್ಪಾದನೆ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಧರ್ಮ, ನೈತಿಕತೆ, ಸಂಸ್ಕೃತಿ ಹೆಸರಲ್ಲಿ ನನ್ನ ದೇಶದ ಬೀದಿಗಳಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡುವುದು ಭಯೋತ್ಪಾದನೆಯಲ್ಲದೆ ಮತ್ತೇನು? ಗೋಹತ್ಯೆ ಬಗ್ಗೆ ಸಣ್ಣ ಅನುಮಾನ ಬಂದ್ರೂ ಕಾನೂನು ಕೈಗೆತ್ತಿಕೊಂಡು ಜನರನ್ನ ಹತ್ಯೆ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ, ಪ್ರತಿರೋಧಿ ಧ್ವನಿಗಳನ್ನು ಹತ್ತಿಕ್ಕಲು ನಿಂದನೆ, ಬೆದರಿಕೆ ಮೂಲಕ ಟ್ರೋಲ್ ಮಾಡೋದು ಭಯೋತ್ಪಾದನೆ ಅಲ್ಲದಿದ್ರೆ…. ಹಾಗಾದ್ರೆ ಭಯೋತ್ಪಾದನೆ ಎಂದರೆ ಏನು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

    prakash raj

    ಕೆಲ ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂದರ್ಭದಲ್ಲೂ ಪ್ರಕಾಶ್ ರೈ, ಪ್ರಧಾನಿ ಮೋದಿಯವರ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಂಭ್ರಮಿಸಿ ಟ್ರೊಲ್ ಮಾಡಿದವರನ್ನು ಮೋದಿ ಫಾಲೋ ಮಾಡುತ್ತಿದ್ದಾರೆ. ನನಗಿಂತ ಅವರು ದೊಡ್ಡ ನಟ ಎಂದು ಹೇಳಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ನಟ ಪ್ರಕಾಶ್ ಅವರ ವಿರುದ್ಧ ವಕೀಲರೊಬ್ಬರು ಲಕ್ನೋ ಕೋರ್ಟ್‍ನಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

    ನಂತರ ಕಾರಂತರ ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ನನ್ನ ಮಾತಿನಿಂದ ನೋವಾಗಿದ್ದಾರೆ ಕ್ಷಮಿಸಿ. ನಿಮ್ಮಲ್ಲಿ ಆತಂಕವನ್ನು ಸೃಷ್ಟಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದರು.

    xkamal hassan 14 1473871077.jpg.pagespeed.ic .FYskuwMvHB

    ತಮಿಳು ನಟ ಕಮಲ್ ಹಾಸನ್ ಆನಂದ ವಿಕಟನ್ ಎಂಬ ವಾರ ಪತ್ರಿಕೆಗೆ ಅಂಕಣ ಬರೆದಿದ್ದರು. ಈ ಲೇಖನದಲ್ಲಿ ಹಿಂದೂ ಭಯೋತ್ಪಾದನೆ ಇರುವುದನ್ನು ಬಲಪಂಥೀಯರು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಯಾವುದೇ ಸಂಘಟನೆ ಹೆಸರನ್ನು ಪ್ರಸ್ತಾಪಿಸದೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ನಟ ಕಮಲ್ ರ ಹೇಳಿಕೆಗೆ ಬಲಪಂಥೀಯ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಅವರ ವಿರುದ್ಧ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.