Tag: ಕರ್ನಾಟಕ ವೈಭವ್

  • ರೈತರಿಗೆ ಪರಿಹಾರ ನೀಡದ್ದಕ್ಕೆ 7 ಕರ್ನಾಟಕ ವೈಭವ್ ಬಸ್ ಜಪ್ತಿ!

    ರೈತರಿಗೆ ಪರಿಹಾರ ನೀಡದ್ದಕ್ಕೆ 7 ಕರ್ನಾಟಕ ವೈಭವ್ ಬಸ್ ಜಪ್ತಿ!

    ಚಿತ್ರದುರ್ಗ: ಈ ಹಿಂದೆ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳ ವಾಹನಗಳನ್ನು ಜಪ್ತಿ ಮಾಡಿದ್ದಾಯ್ತು, ಪೀಠೋಪಕರಣಗಳನ್ನ ಹರಾಜು ಹಾಕಿದ್ದೂ ಆಯ್ತು, ಅಷ್ಟು ಸಾಲದು ಅಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದ ಅಧೀನದಲ್ಲಿರೋ ರೈಲನ್ನು ಜಪ್ತಿ ಮಾಡಲು ಆದೇಶಿಸಿದ್ದ ಚಿತ್ರದುರ್ಗದ ನ್ಯಾಯಾಲಯ ಇಂದು ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ವೈಭವ ಬಸ್‍ಗಳನ್ನೂ ಜಪ್ತಿ ಮಾಡಲು ಆದೇಶಿಸಿದೆ.

    12 ವರ್ಷಗಳ ಹಿಂದೆ ಚಿತ್ರದುರ್ಗ ತಾಲೂಕಿನ ಭರಮಸಾಗರದ ಬಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ತಮ್ಮ ವಾಣಿಜ್ಯ ನಿವೇಶನಗಳನ್ನು 7 ಮಂದಿ ರೈತರು ನೀಡಿದ್ದರು. ಈ ವೇಳೆ ಒಂದು ವರ್ಷದ ಒಳಗೆ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ ಇನ್ನೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರು ಚಿತ್ರದುರ್ಗದ ಒಂದನೇ ಅಪರ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಿವಣ್ಣ, 7 ಕೆಎಸ್‍ಆರ್‍ಟಿಸಿ ಕರ್ನಾಟಕ ವೈಭವ ಬಸ್‍ಗಳನ್ನ ಜಪ್ತಿ ಮಾಡಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೋಮವಾರ ಆದೇಶಿಸಿದ್ದಾರೆ.

    ಸಂತ್ರಸ್ತರ ಪರವಾಗಿ ಹಿರಿಯ ವಕೀಲ ಬಿ.ಕೆ.ರೆಹಮತುಲ್ಲ ವಾದ ಮಂಡಿಸಿದ್ದರು.