ಬೆಂಗಳೂರು: 14 ವರ್ಷದ ಬಾಲಕ ಸೇರಿದಂತೆ ಇಂದು ಒಟ್ಟು 14 ಮಂದಿಗೆ ಕೊರೊನಾ ಬಂದಿದ್ದು ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ಗಣಿ ನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ನಂಜನಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರ ರೋಗಿ 81ನೇ ವ್ಯಕ್ತಿ ಪುತ್ರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?
14 ವರ್ಷದ ಬಾಲಕ ಪೋಷಕರ ಸ್ನೇಹಿತರೊಂದಿಗೆ ವಿವಿಧ ವಾಹನಗಳನ್ನು ಬಳಸಿಕೊಂಡು ನಾಲ್ಕು ದಿನಗಳ ಹಿಂದೆ ನಂಜನಗೂಡಿನಿಂದ ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ನಗರಕ್ಕೆ ಆಗಮಿಸಿದ್ದ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಂಜನಗೂಡಿನಿಂದ ಬಂದ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಮೂವರ ಪರೀಕ್ಷೆ ವರದಿ ಬಂದಿದ್ದು, ಅವರಲ್ಲಿ ಬಾಲಕನಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಮೂಲಕ ಬಳ್ಳಾರಿ ಜಿಲ್ಲೆಯ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗಿದೆ.
ಜಿಲ್ಲಾಡಳಿತ ನಂಜನಗೂಡಿನಿಂದ ಬಂದ ಈ ಮೂವರನ್ನು ಬಳ್ಳಾರಿಗೆ ಬಂದ ಕೂಡಲೇ ಚಿಕಿತ್ಸೆಗೆ ಒಳಪಡಿಸಿ ಪ್ರತ್ಯೇಕವಾಗಿ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಸೋಂಕಿತರು ಬೇರೆ ಯಾರನ್ನು ಸಂಪರ್ಕ ಮಾಡಲು ಬಿಟ್ಟಿಲ್ಲ. ದೆಹಲಿಯ ಜಮಾತ್ಗೆ ತೆರಳಿದ್ದ ಬೀದರಿನ 9 ಮಂದಿ ಜೊತೆ ಒಬ್ಬರ ಪತ್ನಿಗೂ ಕೊರೊನಾ ಬಂದಿದೆ. ಇದನ್ನೂ ಓದಿ: ಎಲ್ಲೆಂದರಲ್ಲಿ, ಡಾಕ್ಟರ್ ಮೇಲೆ ಉಗುಳುತ್ತಿದ್ದಾರೆ ದೆಹಲಿ ಮಸೀದಿಯ ಕ್ವಾರಂಟೈನ್ಗಳು
ರೋಗಿ 111: ಮೈಸೂರಿನ 24 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್ಮೇಟ್) ಸಂಪರ್ಕಿತರಾಗಿದ್ದರು. ಅವರನ್ನು ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್ಗಳಿಂದ ನಮಾಜ್
ರೋಗಿ 112: ಮೈಸೂರಿನ 22 ವರ್ಷದ ಪುರುಷರಾಗಿದ್ದು, ರೋಗಿ 88 (ರೂಮ್ಮೇಟ್) ಸಂಪರ್ಕಿತರಾಗಿದ್ದು ಮೈಸೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ 113: ಬಳ್ಳಾರಿಯ 14 ವರ್ಷದ ಬಾಲಕ ರೋಗಿ 81ನೇ ವ್ಯಕ್ತಿಯ ಮಗನಾಗಿದ್ದು ಬಳ್ಳಾರಿ ಆಸ್ಪತ್ರೆ ನಿಗಾ ಇಡಲಾಗಿದೆ. ಇದನ್ನೂ ಓದಿ: ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ
ರೋಗಿ 114: ಬೀದರ್ನ ಬಿಲಾಲ್ ಕಾಲೋನಿ ನಿವಾಸಿ 48 ವರ್ಷದ ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 115: ಬೀದರ್ ಲಾಲ್ವಾಡಿ ರಸ್ತೆಯ ನಿವಾಸಿ 30 ಪುರುಷನಾಗಿದ್ದು, ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 116: 41 ಪುರುಷ ಶಹಗುಂಜ್, ಬೀದರ್ ನಿವಾಸಿಯಾಗಿದ್ದಾರೆ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 117: 66 ಪುರುಷ ಗೊಲೆಕ್ಬಾನಾ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 118: 59 ಪುರುಷ ಬಸವಕಲ್ಯಾಣ್, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 119: 39 ಪುರುಷ ಪಹೇಲಿ ಚೌಕಿ, ಹೈದರಾಬಾದ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 120: 60 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 121: 63 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 122: 73 ಪುರುಷ ಕಿರಮಣಿ ಕಾಲೋನಿ, ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರೋಗಿ 123: 45 ಪುರುಷ ಬೀದರ್ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾರ್ಚ್ 13ರಿಂದ 18ರವರೆಗೆ ಭಾಗವಹಿಸಿದ್ದರು. ಸದ್ಯ ಅವರನ್ನು ಬೀದರ್ನಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಗಿ 124: 60 ಮಹಿಳೆ ಕಲಬುರಗಿ ನಿವಾಸಿ. ಅವರು ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು. ಸದ್ಯ ಅವರನ್ನು ಕಲಬುರಗಿಯಲ್ಲಿ ಗೊತ್ತುಪಡಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ.